ಬೆಂಗಳೂರು:ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರನ್ನು ಬಸವೇಶ್ವರ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 2 ಕೆ.ಜಿ 150 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ನಾಗದೇವನಹಳ್ಳಿಯ ಆರ್.ಬಿ. ಮದನ್ಕುಮಾರ್ (22), ಕೆ.ಪಿ. ಅಗ್ರಹಾರದ ಹೇಮಂತ್ ಕುಮಾರ್ (20) ಹಾಗೂ ಬಿ. ತೇಜಸ್ (20) ಬಂಧಿತರು.
'ಆರೋಪಿ ಮದನ್ ಕುಮಾರ್ ಕಾರಿನಲ್ಲಿ ಶಿವನಗರದ ಶಾಲೆಯೊಂದರ ಬಳಿ ಬಂದಿದ್ದ. ಆತನ ಬಳಿ ಗಾಂಜಾ ಇದ್ದ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ದಾಳಿ ಮಾಡಿ ಬಂಧಿಸಿದ್ದಾರೆ. ಆತ ನೀಡಿದ್ದ ಮಾಹಿತಿಯಂತೆ ಉಳಿದವರನ್ನು ಸೆರೆ ಹಿಡಿದಿದ್ದಾರೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.
'ಆರೋಪಿಗಳು ಹಲವು ವರ್ಷಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು, ಗಾಂಜಾ ಮಾರುತ್ತಿದ್ದರು' ಎಂದೂ ತಿಳಿಸಿದರು.