ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರ ಬಂಧನ

Last Updated 19 ಸೆಪ್ಟೆಂಬರ್ 2020, 7:52 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು:ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರನ್ನು ಬಸವೇಶ್ವರ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 2 ಕೆ.ಜಿ 150 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ನಾಗದೇವನಹಳ್ಳಿಯ ಆರ್.ಬಿ. ಮದನ್‌ಕುಮಾರ್ (22), ಕೆ.ಪಿ. ಅಗ್ರಹಾರದ ಹೇಮಂತ್ ಕುಮಾರ್ (20) ಹಾಗೂ ಬಿ. ತೇಜಸ್ (20) ಬಂಧಿತರು.

'ಆರೋಪಿ ಮದನ್ ಕುಮಾರ್ ಕಾರಿನಲ್ಲಿ ಶಿವನಗರದ ಶಾಲೆಯೊಂದರ ಬಳಿ ಬಂದಿದ್ದ. ಆತನ ಬಳಿ ಗಾಂಜಾ ಇದ್ದ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ದಾಳಿ ಮಾಡಿ ಬಂಧಿಸಿದ್ದಾರೆ. ಆತ ನೀಡಿದ್ದ ಮಾಹಿತಿಯಂತೆ ಉಳಿದವರನ್ನು ಸೆರೆ ಹಿಡಿದಿದ್ದಾರೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

'ಆರೋಪಿಗಳು ಹಲವು ವರ್ಷಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು, ಗಾಂಜಾ ಮಾರುತ್ತಿದ್ದರು' ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT