‘ಪ್ರತಿ ತಿಂಗಳ 5ರಂದು ಗೌರವಧನ ಬಿಡುಗಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಕೇಂದ್ರದ ಪ್ರೋತ್ಸಾಹಧನ ಮತ್ತು ಎನ್ಸಿಡಿ ಹಣವನ್ನು ಕೂಡಲೇ ಪಾವತಿಸಬೇಕು. ಆಭಾ ಕಾರ್ಡ್, ಮತದಾರರ ಚೀಟಿ ಜೋಡಣೆ (ಬಿಎಲ್ಒ ಕೆಲಸ), ಇ–ಸಂಜೀವಿನಿ ಮುಂತಾದ ಮೊಬೈಲ್ ಆಧಾರಿತ ಕೆಲಸಗಳನ್ನು ಆಶಾಗಳಿಂದ ಒತ್ತಾಯ ಪೂರ್ವಕವಾಗಿ ಹೇರಬಾರದು. ಬೆಂಗಳೂರು ನಗರದ ದುಬಾರಿ ಜೀವನದ ವೆಚ್ಚಕ್ಕೆ ಅನುಗುಣವಾಗಿ ಬಿಬಿಎಂಪಿ ಆಶಾಗಳಿಗೆ ಹೆಚ್ಚುವರಿಯಾಗಿ ₹5 ಸಾವಿರ ಪ್ರೋತ್ಸಾಹಧನ ನಿಗದಿಗೊಳಿಸಿ, ನಗರದ ಆಶಾಗಳಿಗೆ ಪ್ರತಿ ತಿಂಗಳ ಬಸ್ ಪಾಸ್ ಸೌಲಭ್ಯ ನೀಡಬೇಕು’ ಎಂದು ಸಂಘದ ಜಿಲ್ಲಾ ಮುಖಂಡ ದುರಗೇಶ್ ಪ್ರಕಾಶ್ ಆಗ್ರಹಿಸಿದರು.