ಬೆಂಗಳೂರು: ಕೆಂಪೇಗೌಡ ನಗರ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಸಿಬ್ಬಂದಿಗಳಿಬ್ಬರ ನಡುವೆ ಮಾರಾಮಾರಿ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
‘ಭದ್ರತಾ ಕೆಲಸ ಮಾಡುವ ವಾಸು ಹಾಗೂ ಯತೀಶ್ ನಡುವೆ ಗಲಾಟೆ ಆಗಿದೆ. ಇಬ್ಬರೂ ದೂರು ನೀಡಿದ್ದು, ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಕೆಂಪೇಗೌಡ ನಗರ ಠಾಣೆ ಮೂಲಗಳು ಹೇಳಿವೆ.
ವಾಸು ಅವರ ಪತ್ನಿಯನ್ನು ಚುಡಾಯಿಸುತ್ತಿದ್ದ ಯತೀಶ್, ಮೊಬೈಲ್ಗೆ ಅಶ್ಲೀಲ ಸಂದೇಶ ಕಳುಹಿಸಿ ಪೀಡಿಸುತ್ತಿದ್ದರು ಎಂಬುದು ಗಲಾಟೆಗೆ ಕಾರಣ. ‘ವಾಸು ಹಲ್ಲೆ ಮಾಡಿದ್ದಾಗಿ ಯತೀಶ್, ಪತ್ನಿಯನ್ನು ಯತೀಶ್ ಚುಡಾಯಿಸುತ್ತಿದ್ದರೆಂದು ಎಂದು ವಾಸು ದೂರು ಕೊಟ್ಟಿದ್ದಾರೆ‘ ಎಂದು ತಿಳಿಸಿವೆ.