‘ಅರ್ಚಕರ ಮಾತು ಕೇಳದೇ ರಂಪಾಟ ಮಾಡಿದ್ದ ಮಹಿಳೆ, ಗರ್ಭಗುಡಿ ಒಳಗೆ ಹೋಗಲು ಮುಂದಾಗಿದ್ದರು. ತಡೆದಿದ್ದಕ್ಕೆ, ಅರ್ಚಕರ ಮೇಲೆ ಹಾಗೂ ದೇವಸ್ಥಾನದಲ್ಲೆಲ್ಲ ಉಗುಳಿ ಶಾಪ ಹಾಕಿದ್ದರು. ಸ್ಥಳಕ್ಕೆ ಬಂದಿದ್ದ ಮುನಿಕೃಷ್ಣಪ್ಪ, ದೇವಸ್ಥಾನದಿಂದ ಹೊರಗೆ ಹೋಗುವಂತೆ ಮಹಿಳೆ ವಿರುದ್ಧ ಹರಿಹಾಯ್ದಿದ್ದ. ಅದಕ್ಕೆ ಮಹಿಳೆ ಒಪ್ಪಿರಲಿಲ್ಲ. ಸಿಟ್ಟಾದ ಆರೋಪಿ, ಮಹಿಳೆ ಮೇಲೆ ಹಲ್ಲೆ ಮಾಡಿದ್ದ. ಜಡೆ ಹಿಡಿದು ಎಳೆದೊಯ್ದು ದೇವಸ್ಥಾನದಿಂದ ಹೊರಗೆ ಹಾಕಿದ್ದ’ ಎಂದು ಮೂಲಗಳು ತಿಳಿಸಿವೆ.