‘ಗೋಕುಲ ಬ್ರಿಡ್ಜ್ ನ ಹಳೆಯ ರೈಲ್ವೆ ಗೇಟ್ ಬಳಿ ಮಾಸ್ಕ್ ಧರಿಸದೆ ಬಾಬು ಓಡಾಡುತ್ತಿದ್ದ. ಮಾಸ್ಕ್ ಧರಿಸುವಂತೆ ಸಿಬ್ಬಂದಿ ಸೂಚಿಸಿದಾಗ ಗ್ಯಾರೇಜ್ನಲ್ಲಿದ್ದ ಶಿವಕುಮಾರ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದೇ ವೇಳೆ ‘ಕೊರೊನಾ ಬಂದಿಲ್ಲ. ಮಾಸ್ಕ್ ಹಾಕಲ್ಲ’ ಎನ್ನುತ್ತಾ ಕಾರ್ಲ್ ಮಾರ್ಕ್ಸ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ಮೂವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.