‘ಹೆಂಡತಿ ಇಲ್ಲದಿರುವ ಸಮಯದಲ್ಲಿ ನಾದಿನಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ನಾಗರಾಜ್, ‘ನಿನ್ನನ್ನು ಪ್ರೀತಿಸುತ್ತಿದ್ದೇನೆ. ಒಪ್ಪಿದರೆ, ಮದುವೆಯಾಗುತ್ತೇನೆ’ ಎಂದು ಪೀಡಿಸುತ್ತಿದ್ದರು. ಮದುವೆ ಇಷ್ಟವಿಲ್ಲವೆಂದು ನಾದಿನಿ ಹೇಳಿದ್ದರು. ಈ ಸಂಬಂಧ ಹಲವು ಬಾರಿ ಜಗಳ ಆಗಿತ್ತು. ಕೋಪಗೊಂಡಿದ್ದ ಆರೋಪಿ, ಇದೇ 26ರಂದು ಬೆಳಿಗ್ಗೆ ತರಕಾರಿ ಕತ್ತರಿಸುವ ಚಾಕುವಿನಿಂದ ನಾದಿನಿಗೆ ಇರಿದಿದ್ದರು. ಎದೆ, ಹೊಟ್ಟೆ ಹಾಗೂ ಭುಜಕ್ಕೆ ಗಾಯವಾಗಿ ನಾದಿನಿ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ಸಹಾಯಕ್ಕೆ ಬಂದ ಸ್ಥಳೀಯರೇ ಆಸ್ಪತ್ರೆಗೆ ಸೇರಿಸಿದ್ದರು’ ಎಂದೂ ಪೊಲೀಸರು ಹೇಳಿದರು.