<p><strong>ಬೆಂಗಳೂರು:</strong> ರಸ್ತೆ ಮಧ್ಯೆ ಬೈಕ್ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಕಾನ್ಸ್ಟೆಬಲ್ ಎಂ.ವಿ. ಸೋಮಶೇಖರ್ ಎಂಬುವವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಫೆ. 15ರಂದು ರಾತ್ರಿ ನಡೆದಿರುವ ಘಟನೆ ಸಂಬಂಧ ಸೋಮಶೇಖರ್ ದೂರು ನೀಡಿದ್ದಾರೆ. ಬೈಕ್ ಸವಾರ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಸಿಟಿ ಮಾರ್ಕೆಟ್ ಠಾಣೆ ಕಾನ್ಸ್ಟೆಬಲ್ ಸೋಮಶೇಖರ್, ಕೆಲಸ ಮುಗಿಸಿ ಮಫ್ತಿಯಲ್ಲಿ ಕಾರಿನಲ್ಲಿ ಮನೆಯತ್ತ ಹೊರಟಿ<br />ದ್ದರು. ಮಸ್ಕಾನ್ ದರ್ಗಾ ಬಳಿಯ ರಸ್ತೆ ಮಧ್ಯೆ ರಾಯಲ್ ಎನ್ಫೀಲ್ಡ್ ಬೈಕ್ ನಿಲ್ಲಿಸಿದ್ದ ಸವಾರ, ಅದರ ಮೇಲೆ ಕುಳಿತು ಮೊಬೈಲ್ನಲ್ಲಿ ಮಾತನಾಡುತ್ತಿದ್ದ. ವಾಹನಗಳ ಸಂಚಾರಕ್ಕೆ ತೊಂದರೆಯಾಗಿ, ದಟ್ಟಣೆ ಉಂಟಾಗಿತ್ತು’ ಎಂದರು.</p>.<p>‘ಸವಾರನಿಗೆ ಬುದ್ಧಿವಾದ ಹೇಳಿದ್ದ ಕಾನ್ಸ್ಟೆಬಲ್, ‘ಬೈಕ್ನಿಂದ ಇತರರಿಗೆ ತೊಂದರೆ ಆಗುತ್ತಿದೆ. ಬೈಕ್ ಅನ್ನು ಪಕ್ಕಕ್ಕೆ ನಿಲ್ಲಿಸು’ ಎಂದಿದ್ದರು. ಕೋಪಗೊಂಡ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಸವಾರನ ಸ್ನೇಹಿತರು ಸ್ಥಳಕ್ಕೆ ಬಂದಿದ್ದರು.’</p>.<p>‘ಸವಾರ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಕಾನ್ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದರು. ‘ನಮ್ಮ ಏರಿಯಾಗೆ ಬಂದು ನಮಗೇ ಬುದ್ಧಿ<br />ಹೇಳುತ್ತಿಯಾ ?’ ಎಂದು ಉರ್ದುವಿನಲ್ಲಿ ಬೈದಿದ್ದರು. ‘ಸಾಯುವವರೆಗೂ ಹೊಡೆಯಿರಿ’ ಎಂದು ಮತ್ತೊಬ್ಬ ಹೇಳಿದ್ದ. ಒಬ್ಬಾತ,<br />ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದ. ಪ್ರತಿರೋಧವೊಡ್ಡಿದ್ದ ಕಾನ್ಸ್ಟೆಬಲ್, ಆತನ ಕೈ ಬಿಡಿಸಿಕೊಂಡಿದ್ದರು’ ಎಂದರು.</p>.<p>‘ಕೆಳಗೆ ಬಿದ್ದ ಕಾನ್ಸ್ಟೆಬಲ್ ಅವರಿಗೆ ಆರೋಪಿಗಳು ಕಾಲಿನಿಂದ ಒದ್ದಿದ್ದರು. ‘ನಾನು ಪೊಲೀಸ್’ ಎಂದು ಹೇಳಿದರೂ ಆರೋಪಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಾಯಗೊಂಡಿದ್ದ ಕಾನ್ಸ್ಟೆಬಲ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.</p>.<p>‘ಕೊಲೆಗೆ ಯತ್ನಿಸಿರುವ ಆರೋಪಿಗಳು, ಕಾರಿನಲ್ಲಿದ್ದ ₹ 8,000 ನಗದುಕದ್ದೊಯ್ದಿದ್ದಾರೆ’ ಎಂದು ಕಾನ್ಸ್ಟೆಬಲ್ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿದರು.</p>.<p><strong>ಠಾಣೆಯಲ್ಲಿರದ ಸಿಬ್ಬಂದಿ: 45 ನಿಮಿಷ ಕಾದ ದೂರುದಾರ<br />ಬೆಂಗಳೂರು: </strong>ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಸಿಬ್ಬಂದಿ ಇಲ್ಲದಿದ್ದರಿಂದ ದೂರುದಾರರೊಬ್ಬರು 45 ನಿಮಿಷ ಕಾದು ಮನೆಗೆ ವಾಪಸು ಹೋಗಿದ್ದು, ಪೊಲೀಸರ ಈ ವರ್ತನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.</p>.<p>ಸ್ಥಳೀಯ ನಿವಾಸಿ ಮಂಜುನಾಥ್ ಎಂಬುವವರು ತಮ್ಮ ಸೈಕಲ್ ಕಳವಾದ ಬಗ್ಗೆ ದೂರು ನೀಡಲು ಶುಕ್ರವಾರ ಠಾಣೆಗೆ ಹೋಗಿದ್ದರು. ಠಾಣೆಯಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ. ಎಲ್ಲ ಕುರ್ಚಿಗಳು ಖಾಲಿ ಇದ್ದವು. ಠಾಣಾಧಿಕಾರಿ ಸಹ ಹೊರಗಡೆ ಹೋಗಿದ್ದರು.</p>.<p>ಸಿಬ್ಬಂದಿ ಬರಬಹುದೆಂದು ಕಾದು ತಾಳ್ಮೆ ಕಳೆದುಕೊಂಡ ಮಂಜುನಾಥ್, ದೂರು ನೀಡುವುದೇ ಬೇಡವೆಂದು ಹತಾಶೆಯಿಂದ ಮನೆಗೆ ವಾಪಸು ತೆರಳಿದ್ದರು. ತಮಗಾದ ಅನುಭವವನ್ನು ಟ್ವೀಟ್ ಮಾಡಿರುವ ಮಂಜುನಾಥ್, ‘ದೇವರೇ ನಮ್ಮನ್ನು ರಕ್ಷಿಸು’ ಎಂದಿದ್ದಾರೆ.</p>.<p>ಮಂಜುನಾಥ್ ಟ್ವೀಟ್ ಹಂಚಿಕೊಂಡಿರುವ ಹಲವರು, ಪೊಲೀಸರ ವರ್ತನೆಯನ್ನು ಖಂಡಿಸಿದ್ದಾರೆ. ‘ಠಾಣೆಯಲ್ಲಿ ಸಿಬ್ಬಂದಿ ಇಲ್ಲದಿದ್ದರೆ, ಜನರ ದೂರು ಪಡೆಯುವವರು ಯಾರು. ಹಿರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ.</p>.<p><strong>ಠಾಣೆಗೆ ಕರೆಸಿ ದೂರು ಸ್ವೀಕಾರ:</strong> ಟ್ವೀಟ್ ಎಲ್ಲೆಡೆ ಹರಿದಾಡುತ್ತಿದ್ದಂತೆ ಎಚ್ಚೆತ್ತ ಹಿರಿಯ ಅಧಿಕಾರಿಗಳು, ಮಂಜುನಾಥ್ ಅವರನ್ನು ಶನಿವಾರ ಠಾಣೆಗೆ ಕರೆಸಿ ದೂರು ಸ್ವೀಕರಿಸಿದ್ದಾರೆ. ಎಫ್ಐಆರ್ ಸಹ ದಾಖಲಿಸಿಕೊಂಡಿದ್ದಾರೆ. ಇದಾದ ಬಳಿಕ ಮಂಜುನಾಥ್, ತಮ್ಮ ಟ್ವೀಟ್ ಅಳಿಸಿ ಹಾಕಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಸ್ತೆ ಮಧ್ಯೆ ಬೈಕ್ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಕಾನ್ಸ್ಟೆಬಲ್ ಎಂ.ವಿ. ಸೋಮಶೇಖರ್ ಎಂಬುವವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಫೆ. 15ರಂದು ರಾತ್ರಿ ನಡೆದಿರುವ ಘಟನೆ ಸಂಬಂಧ ಸೋಮಶೇಖರ್ ದೂರು ನೀಡಿದ್ದಾರೆ. ಬೈಕ್ ಸವಾರ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಸಿಟಿ ಮಾರ್ಕೆಟ್ ಠಾಣೆ ಕಾನ್ಸ್ಟೆಬಲ್ ಸೋಮಶೇಖರ್, ಕೆಲಸ ಮುಗಿಸಿ ಮಫ್ತಿಯಲ್ಲಿ ಕಾರಿನಲ್ಲಿ ಮನೆಯತ್ತ ಹೊರಟಿ<br />ದ್ದರು. ಮಸ್ಕಾನ್ ದರ್ಗಾ ಬಳಿಯ ರಸ್ತೆ ಮಧ್ಯೆ ರಾಯಲ್ ಎನ್ಫೀಲ್ಡ್ ಬೈಕ್ ನಿಲ್ಲಿಸಿದ್ದ ಸವಾರ, ಅದರ ಮೇಲೆ ಕುಳಿತು ಮೊಬೈಲ್ನಲ್ಲಿ ಮಾತನಾಡುತ್ತಿದ್ದ. ವಾಹನಗಳ ಸಂಚಾರಕ್ಕೆ ತೊಂದರೆಯಾಗಿ, ದಟ್ಟಣೆ ಉಂಟಾಗಿತ್ತು’ ಎಂದರು.</p>.<p>‘ಸವಾರನಿಗೆ ಬುದ್ಧಿವಾದ ಹೇಳಿದ್ದ ಕಾನ್ಸ್ಟೆಬಲ್, ‘ಬೈಕ್ನಿಂದ ಇತರರಿಗೆ ತೊಂದರೆ ಆಗುತ್ತಿದೆ. ಬೈಕ್ ಅನ್ನು ಪಕ್ಕಕ್ಕೆ ನಿಲ್ಲಿಸು’ ಎಂದಿದ್ದರು. ಕೋಪಗೊಂಡ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಸವಾರನ ಸ್ನೇಹಿತರು ಸ್ಥಳಕ್ಕೆ ಬಂದಿದ್ದರು.’</p>.<p>‘ಸವಾರ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಕಾನ್ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದರು. ‘ನಮ್ಮ ಏರಿಯಾಗೆ ಬಂದು ನಮಗೇ ಬುದ್ಧಿ<br />ಹೇಳುತ್ತಿಯಾ ?’ ಎಂದು ಉರ್ದುವಿನಲ್ಲಿ ಬೈದಿದ್ದರು. ‘ಸಾಯುವವರೆಗೂ ಹೊಡೆಯಿರಿ’ ಎಂದು ಮತ್ತೊಬ್ಬ ಹೇಳಿದ್ದ. ಒಬ್ಬಾತ,<br />ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದ. ಪ್ರತಿರೋಧವೊಡ್ಡಿದ್ದ ಕಾನ್ಸ್ಟೆಬಲ್, ಆತನ ಕೈ ಬಿಡಿಸಿಕೊಂಡಿದ್ದರು’ ಎಂದರು.</p>.<p>‘ಕೆಳಗೆ ಬಿದ್ದ ಕಾನ್ಸ್ಟೆಬಲ್ ಅವರಿಗೆ ಆರೋಪಿಗಳು ಕಾಲಿನಿಂದ ಒದ್ದಿದ್ದರು. ‘ನಾನು ಪೊಲೀಸ್’ ಎಂದು ಹೇಳಿದರೂ ಆರೋಪಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಾಯಗೊಂಡಿದ್ದ ಕಾನ್ಸ್ಟೆಬಲ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.</p>.<p>‘ಕೊಲೆಗೆ ಯತ್ನಿಸಿರುವ ಆರೋಪಿಗಳು, ಕಾರಿನಲ್ಲಿದ್ದ ₹ 8,000 ನಗದುಕದ್ದೊಯ್ದಿದ್ದಾರೆ’ ಎಂದು ಕಾನ್ಸ್ಟೆಬಲ್ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿದರು.</p>.<p><strong>ಠಾಣೆಯಲ್ಲಿರದ ಸಿಬ್ಬಂದಿ: 45 ನಿಮಿಷ ಕಾದ ದೂರುದಾರ<br />ಬೆಂಗಳೂರು: </strong>ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಸಿಬ್ಬಂದಿ ಇಲ್ಲದಿದ್ದರಿಂದ ದೂರುದಾರರೊಬ್ಬರು 45 ನಿಮಿಷ ಕಾದು ಮನೆಗೆ ವಾಪಸು ಹೋಗಿದ್ದು, ಪೊಲೀಸರ ಈ ವರ್ತನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.</p>.<p>ಸ್ಥಳೀಯ ನಿವಾಸಿ ಮಂಜುನಾಥ್ ಎಂಬುವವರು ತಮ್ಮ ಸೈಕಲ್ ಕಳವಾದ ಬಗ್ಗೆ ದೂರು ನೀಡಲು ಶುಕ್ರವಾರ ಠಾಣೆಗೆ ಹೋಗಿದ್ದರು. ಠಾಣೆಯಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ. ಎಲ್ಲ ಕುರ್ಚಿಗಳು ಖಾಲಿ ಇದ್ದವು. ಠಾಣಾಧಿಕಾರಿ ಸಹ ಹೊರಗಡೆ ಹೋಗಿದ್ದರು.</p>.<p>ಸಿಬ್ಬಂದಿ ಬರಬಹುದೆಂದು ಕಾದು ತಾಳ್ಮೆ ಕಳೆದುಕೊಂಡ ಮಂಜುನಾಥ್, ದೂರು ನೀಡುವುದೇ ಬೇಡವೆಂದು ಹತಾಶೆಯಿಂದ ಮನೆಗೆ ವಾಪಸು ತೆರಳಿದ್ದರು. ತಮಗಾದ ಅನುಭವವನ್ನು ಟ್ವೀಟ್ ಮಾಡಿರುವ ಮಂಜುನಾಥ್, ‘ದೇವರೇ ನಮ್ಮನ್ನು ರಕ್ಷಿಸು’ ಎಂದಿದ್ದಾರೆ.</p>.<p>ಮಂಜುನಾಥ್ ಟ್ವೀಟ್ ಹಂಚಿಕೊಂಡಿರುವ ಹಲವರು, ಪೊಲೀಸರ ವರ್ತನೆಯನ್ನು ಖಂಡಿಸಿದ್ದಾರೆ. ‘ಠಾಣೆಯಲ್ಲಿ ಸಿಬ್ಬಂದಿ ಇಲ್ಲದಿದ್ದರೆ, ಜನರ ದೂರು ಪಡೆಯುವವರು ಯಾರು. ಹಿರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ.</p>.<p><strong>ಠಾಣೆಗೆ ಕರೆಸಿ ದೂರು ಸ್ವೀಕಾರ:</strong> ಟ್ವೀಟ್ ಎಲ್ಲೆಡೆ ಹರಿದಾಡುತ್ತಿದ್ದಂತೆ ಎಚ್ಚೆತ್ತ ಹಿರಿಯ ಅಧಿಕಾರಿಗಳು, ಮಂಜುನಾಥ್ ಅವರನ್ನು ಶನಿವಾರ ಠಾಣೆಗೆ ಕರೆಸಿ ದೂರು ಸ್ವೀಕರಿಸಿದ್ದಾರೆ. ಎಫ್ಐಆರ್ ಸಹ ದಾಖಲಿಸಿಕೊಂಡಿದ್ದಾರೆ. ಇದಾದ ಬಳಿಕ ಮಂಜುನಾಥ್, ತಮ್ಮ ಟ್ವೀಟ್ ಅಳಿಸಿ ಹಾಕಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>