<p><strong>ಬೆಂಗಳೂರು:</strong> ‘ನಮ್ಮ ತಂದೆಯವರು ಪುಣೆಯಲ್ಲಿ ಉದ್ದಿಮೆದಾರರಾಗಿ ಹತ್ತಾರು ಜನರಿಗೆ ಅನ್ನ ನೀಡುವವರಾಗಿದ್ದರು. 1948ರ ನರಮೇಧದಿಂದಾಗಿ ಎಲ್ಲವನ್ನು ಕಳೆದುಕೊಂಡು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು’ ಎಂದು ಲೇಖಕಿ ವಿಜಯಾ ವಿಷ್ಣುಭಟ್ ಡೋಂಗ್ರೆ ತಿಳಿಸಿದರು.</p>.<p>ಅವರು ರಚಿಸಿದ ‘1948 ಬ್ರಾಹ್ಮಣರ ನರಮೇಧ’ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಗುರುವಾರ ಸ್ವ ಅನುಭವ ವಿವರಿಸಿದರು.</p>.<p>‘ಮಹಾತ್ಮ ಗಾಂಧೀಜಿಯವರ ಹತ್ಯೆ ಆದಾಗ ಚಿತ್ಪಾವನ ಬ್ರಾಹ್ಮಣರನ್ನು ಹುಡುಕಿ ಹುಡುಕಿ ಹಿಂಸೆ ನೀಡಲಾಯಿತು. ಹತ್ಯೆ ಮಾಡಲಾಯಿತು. ನನ್ನ ಒಂದು ಕುಟುಂಬವಲ್ಲ, ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದವು. ನಮ್ಮ ಕುಟುಂಬ ಅನ್ನ ಅರಸಿ 1950ರಲ್ಲಿ ಕರ್ನಾಟಕಕ್ಕೆ ಬಂತು’ ಎಂದು ಹೇಳಿದರು.</p>.<p>‘ಸಂತ್ರಸ್ತ ಕುಟುಂಬದಿಂದ ಬಂದು ಬದುಕು ಅತಂತ್ರವಾಗಿದ್ದರೂ ಯಾರ ಮುಂದೆಯೂ ಕೈಚಾಚದೇ ಸ್ವಾಭಿಮಾನದಿಂದ ಜೀವಿಸಿ ತೋರಿಸಿದ್ದೇವೆ’ ಎಂದರು.</p>.<p>ವಕೀಲ ವಿಕ್ರಮ ಫಡಕೆ ಮಾತನಾಡಿ, ‘1948 ಬ್ರಾಹ್ಮಣರ ನರಮೇಧ ಕೃತಿಯಲ್ಲಿರುವ ಘಟನೆಗಳು ಮನಕಲಕುವಂತಿವೆ. ಅವು ಆಕಸ್ಮಿಕವಾಗಿರದೇ ಸಂಘಟಿತ ಸಂಚು ಆಗಿತ್ತು. ಇಂಥ ಸತ್ಯ ಇತಿಹಾಸಗಳನ್ನು ಮುಚ್ಚಿ ಹಾಕಲಾಗಿತ್ತು. ಅವುಗಳನ್ನು ಲೋಕಕ್ಕೆ ತಿಳಿಸುವ ಕೆಲಸವನ್ನು ಈ ಕೃತಿ ಮಾಡಿದೆ’ ಎಂದು ತಿಳಿಸಿದರು.</p>.<p>ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಹತ್ಯೆಗೈದ ನಂತರ ಗೋಡ್ಸೆ ಬ್ರಾಹ್ಮಣ ಎನ್ನುವ ಕಾರಣಕ್ಕೆ ಬ್ರಾಹ್ಮಣರ ವಿರುದ್ಧ ಪ್ರತಿಕಾರದ ಹಿಂಸಾಚಾರ ನಡೆಯಿತು ಎಂದರು.</p>.<p>ಸಾಹಿತಿ ಜಿ.ಬಿ. ಹರೀಶ್ ಮಾತನಾಡಿ, ‘ದೇಶದ ವಿವಿಧ ಭಾಗಗಳಲ್ಲಿ ನಡೆದ ಇಂತಹ ಘಟನೆಗಳ ವಿವರಗಳು ಇತಿಹಾಸದ ಮುಖ್ಯ ಪ್ರವಾಹದಲ್ಲಿ ಸಮರ್ಪಕವಾಗಿ ದಾಖಲಾಗಿಲ್ಲ. ಇತಿಹಾಸದ ಸತ್ಯಾಂಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಅಗತ್ಯ’ ಎಂದು ಹೇಳಿದರು.</p>.<p>ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ವಿಧಾನ ಪರಿಷತ್ನ ಮಾಜಿ ಸದಸ್ಯೆ ಎಸ್.ಆರ್. ಲೀಲಾ, ಚಿತ್ಪಾವನ ಸಮಾಜದ ಅಧ್ಯಕ್ಷ ಗಣಪತಿ ಜೋಶಿ, ಸಮೃದ್ಧ ಸಾಹಿತ್ಯದ ಪ್ರಕಾಶಕ ಹರ್ಷ ಸಮೃದ್ಧ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಮ್ಮ ತಂದೆಯವರು ಪುಣೆಯಲ್ಲಿ ಉದ್ದಿಮೆದಾರರಾಗಿ ಹತ್ತಾರು ಜನರಿಗೆ ಅನ್ನ ನೀಡುವವರಾಗಿದ್ದರು. 1948ರ ನರಮೇಧದಿಂದಾಗಿ ಎಲ್ಲವನ್ನು ಕಳೆದುಕೊಂಡು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು’ ಎಂದು ಲೇಖಕಿ ವಿಜಯಾ ವಿಷ್ಣುಭಟ್ ಡೋಂಗ್ರೆ ತಿಳಿಸಿದರು.</p>.<p>ಅವರು ರಚಿಸಿದ ‘1948 ಬ್ರಾಹ್ಮಣರ ನರಮೇಧ’ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಗುರುವಾರ ಸ್ವ ಅನುಭವ ವಿವರಿಸಿದರು.</p>.<p>‘ಮಹಾತ್ಮ ಗಾಂಧೀಜಿಯವರ ಹತ್ಯೆ ಆದಾಗ ಚಿತ್ಪಾವನ ಬ್ರಾಹ್ಮಣರನ್ನು ಹುಡುಕಿ ಹುಡುಕಿ ಹಿಂಸೆ ನೀಡಲಾಯಿತು. ಹತ್ಯೆ ಮಾಡಲಾಯಿತು. ನನ್ನ ಒಂದು ಕುಟುಂಬವಲ್ಲ, ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದವು. ನಮ್ಮ ಕುಟುಂಬ ಅನ್ನ ಅರಸಿ 1950ರಲ್ಲಿ ಕರ್ನಾಟಕಕ್ಕೆ ಬಂತು’ ಎಂದು ಹೇಳಿದರು.</p>.<p>‘ಸಂತ್ರಸ್ತ ಕುಟುಂಬದಿಂದ ಬಂದು ಬದುಕು ಅತಂತ್ರವಾಗಿದ್ದರೂ ಯಾರ ಮುಂದೆಯೂ ಕೈಚಾಚದೇ ಸ್ವಾಭಿಮಾನದಿಂದ ಜೀವಿಸಿ ತೋರಿಸಿದ್ದೇವೆ’ ಎಂದರು.</p>.<p>ವಕೀಲ ವಿಕ್ರಮ ಫಡಕೆ ಮಾತನಾಡಿ, ‘1948 ಬ್ರಾಹ್ಮಣರ ನರಮೇಧ ಕೃತಿಯಲ್ಲಿರುವ ಘಟನೆಗಳು ಮನಕಲಕುವಂತಿವೆ. ಅವು ಆಕಸ್ಮಿಕವಾಗಿರದೇ ಸಂಘಟಿತ ಸಂಚು ಆಗಿತ್ತು. ಇಂಥ ಸತ್ಯ ಇತಿಹಾಸಗಳನ್ನು ಮುಚ್ಚಿ ಹಾಕಲಾಗಿತ್ತು. ಅವುಗಳನ್ನು ಲೋಕಕ್ಕೆ ತಿಳಿಸುವ ಕೆಲಸವನ್ನು ಈ ಕೃತಿ ಮಾಡಿದೆ’ ಎಂದು ತಿಳಿಸಿದರು.</p>.<p>ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಹತ್ಯೆಗೈದ ನಂತರ ಗೋಡ್ಸೆ ಬ್ರಾಹ್ಮಣ ಎನ್ನುವ ಕಾರಣಕ್ಕೆ ಬ್ರಾಹ್ಮಣರ ವಿರುದ್ಧ ಪ್ರತಿಕಾರದ ಹಿಂಸಾಚಾರ ನಡೆಯಿತು ಎಂದರು.</p>.<p>ಸಾಹಿತಿ ಜಿ.ಬಿ. ಹರೀಶ್ ಮಾತನಾಡಿ, ‘ದೇಶದ ವಿವಿಧ ಭಾಗಗಳಲ್ಲಿ ನಡೆದ ಇಂತಹ ಘಟನೆಗಳ ವಿವರಗಳು ಇತಿಹಾಸದ ಮುಖ್ಯ ಪ್ರವಾಹದಲ್ಲಿ ಸಮರ್ಪಕವಾಗಿ ದಾಖಲಾಗಿಲ್ಲ. ಇತಿಹಾಸದ ಸತ್ಯಾಂಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಅಗತ್ಯ’ ಎಂದು ಹೇಳಿದರು.</p>.<p>ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ವಿಧಾನ ಪರಿಷತ್ನ ಮಾಜಿ ಸದಸ್ಯೆ ಎಸ್.ಆರ್. ಲೀಲಾ, ಚಿತ್ಪಾವನ ಸಮಾಜದ ಅಧ್ಯಕ್ಷ ಗಣಪತಿ ಜೋಶಿ, ಸಮೃದ್ಧ ಸಾಹಿತ್ಯದ ಪ್ರಕಾಶಕ ಹರ್ಷ ಸಮೃದ್ಧ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>