‘ಹ್ಯಾಂಡಲ್ ಲಾಕ್ ಮುರಿದು ಆಟೊರಿಕ್ಷಾ ಕದ್ದೊಯ್ಯುತ್ತಿದ್ದ ಆರೋಪಿ, ಕೆಲದಿನ ನಿರ್ಜನ ಪ್ರದೇಶಗಳಲ್ಲಿ ನಿಲ್ಲಿಸುತ್ತಿದ್ದ. ನಂತರ, ತನ್ನದೇ ಆಟೊರಿಕ್ಷಾ ಎಂಬುದಾಗಿ ಹೇಳಿ ಮಾರುತ್ತಿದ್ದ. ಬಂದ ಹಣವನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದ. ಕೆ.ಪಿ.ಅಗ್ರಹಾರದಲ್ಲಿ ಎರಡು ಆಟೊರಿಕ್ಷಾ ಹಾಗೂ ವಿಜಯನಗರ, ಕಲಾಸಿಪಾಳ್ಯದಲ್ಲಿ ತಲಾ ಒಂದು ಆಟೊರಿಕ್ಷಾ ಕದ್ದಿದ್ದ’ ಎಂದು ತಿಳಿಸಿದರು.