ಬೆಂಗಳೂರು: ನಕಲಿ ದಾಖಲೆ ಬಳಸಿಕೊಂಡು ಆ್ಯಕ್ಸಿಸ್ ಬ್ಯಾಂಕ್ನಿಂದ ₹ 93 ಲಕ್ಷ ಸಾಲ ಪಡೆದು ವಂಚಿಸಿರುವ ಬಗ್ಗೆ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ವಂಚನೆ ಬಗ್ಗೆ ಬ್ಯಾಂಕ್ ಅಧಿಕಾರಿ ಜಿ.ಎಂ. ಪ್ರವೀಣ್ಕುಮಾರ್ ದೂರು ನೀಡಿದ್ದಾರೆ. ಎಸ್.ಮಂಜುನಾಥ್, ಯು. ಬಸವರಾಜ್, ಆರ್.ಸುರೇಶ್, ಧನ್ಯಕುಮಾರ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದರು.
‘ಅಸ್ತಿ ಹಾಗೂ ಶ್ಯೂರಿಟಿಯ ದಾಖಲೆಗಳನ್ನು ಪೂರ್ಜರಿ ಮಾಡಿದ್ದ ಆರೋಪಿಗಳು, ಅದನ್ನೇ ಬ್ಯಾಂಕ್ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಸಾಲ ವಸೂಲಾತಿಗಾಗಿ ಇತ್ತೀಚೆಗೆ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದಾಗಲೇ ಅವುಗಳು ನಕಲಿ ಎಂಬುದು ಗಮನಕ್ಕೆ ಬಂದಿದೆ.