ಬೆಂಗಳೂರು: ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋಟಕಲ್ನ ಆರ್ಯವೈದ್ಯ ಶಾಲಾ ಸಂಸ್ಥೆಯು ಆಯುಷ್ ವಾತ ಚೂರ್ಣಂ ಮತ್ತು ಶುದ್ಧಿ ಸ್ಯಾನಿಟೈಸರ್ ಬಿಡುಗಡೆ ಮಾಡಿದೆ.
ಸೋಂಕು ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಆರೋಗ್ಯ ವೃದ್ಧಿಸಲು ಇವು ಸಹಾಯಕವಾಗಿವೆ. ಕಂದಾಯ ಸಚಿವ ಆರ್. ಅಶೋಕ ಅವರು ಈ ಉತ್ಪನ್ನಗಳನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಸಂಸ್ಥೆಯ ಟ್ರಸ್ಟಿ ಡಾ. ಸುಜಿತ್ ಎಸ್. ವಾರಿಯರ್ ಉಪಸ್ಥಿತರಿದ್ದರು.
ಆಯುಷ್ ಸಚಿವಾಲಯದ ನಿರ್ದೇಶನದೊಂದಿಗೆ ವಾತ ಚೂರ್ಣಂ ಸಿದ್ಧಪಡಿಸಲಾಗಿದೆ. ಸಂಸ್ಥೆಯ ವಿತರಣಾ ಕೇದ್ರಗಳು ಮತ್ತು ಇತರೆ ಮಳಿಗೆಗಳಲ್ಲಿಯೂ ಖರೀದಿಸಿಬಹುದಾಗಿದೆ ಎಂದು ತಿಳಿಸಿದೆ.