ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾತ ಚೂರ್ಣಂ, ಶುದ್ಧಿ ಸ್ಯಾನಿಟೈಸರ್‌ ಬಿಡುಗಡೆ

Last Updated 15 ಜೂನ್ 2020, 19:50 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋಟಕಲ್‌ನ ಆರ್ಯವೈದ್ಯ ಶಾಲಾ ಸಂಸ್ಥೆಯು ಆಯುಷ್‌ ವಾತ ಚೂರ್ಣಂ ಮತ್ತು ಶುದ್ಧಿ ಸ್ಯಾನಿಟೈಸರ್‌ ಬಿಡುಗಡೆ ಮಾಡಿದೆ.

ಸೋಂಕು ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಆರೋಗ್ಯ ವೃದ್ಧಿಸಲು ಇವು ಸಹಾಯಕವಾಗಿವೆ. ಕಂದಾಯ ಸಚಿವ ಆರ್‌. ಅಶೋಕ ಅವರು ಈ ಉತ್ಪನ್ನಗಳನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಸಂಸ್ಥೆಯ ಟ್ರಸ್ಟಿ ಡಾ. ಸುಜಿತ್‌ ಎಸ್‌. ವಾರಿಯರ್‌ ಉಪಸ್ಥಿತರಿದ್ದರು.

ಆಯುಷ್‌ ಸಚಿವಾಲಯದ ನಿರ್ದೇಶನದೊಂದಿಗೆ ವಾತ ಚೂರ್ಣಂ ಸಿದ್ಧಪಡಿಸಲಾಗಿದೆ. ಸಂಸ್ಥೆಯ ವಿತರಣಾ ಕೇದ್ರಗಳು ಮತ್ತು ಇತರೆ ಮಳಿಗೆಗಳಲ್ಲಿಯೂ ಖರೀದಿಸಿಬಹುದಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT