<p><strong>ಬೆಂಗಳೂರು:</strong> ಕೃತಕ ಬುದ್ಧಿಮತ್ತೆ (ಎ.ಐ) ಮತ್ತು ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಆಧರಿಸಿದ ನೂತನ ಹಾಜರಾತಿ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ವಾಮಮಾರ್ಗ ಹಿಡಿದಿರುವ ಕೆಲವು ಆಯುಷ್ ವೈದ್ಯರು ಹಾಗೂ ಸಿಬ್ಬಂದಿ, ಛಾಯಾಚಿತ್ರ ಬಳಸಿ ಹಾಜರಿ ಹಾಕಿ, ಕರ್ತವ್ಯಕ್ಕೆ ಗೈರಾಗುತ್ತಿರುವ ಕೃತ್ಯ ಪತ್ತೆಯಾಗಿದೆ. </p>.<p>ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯ (ಕೆಎಎಂಎಸ್) ವಿಶ್ಲೇಷಣೆಯಿಂದ ವೈದ್ಯರು, ಸಿಬ್ಬಂದಿಯ ಕಳ್ಳ ಚಟುವಟಿಕೆ ದೃಢಪಟ್ಟಿದೆ. </p>.<p>ಹಾಜರಾತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಮೊಬೈಲ್ ಫೋನ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು (ಕರ್ತವ್ಯ) ಕಳೆದ ವರ್ಷ ಜಾರಿ ಮಾಡಿದೆ. ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ದೋಷಗಳು ಕಾಣಿಸಿಕೊಳ್ಳುತ್ತಿದ್ದ ಕಾರಣ, ಮೊಬೈಲ್ ಆಧಾರಿತ ಇ–ಹಾಜರಾತಿ ವ್ಯವಸ್ಥೆಯನ್ನು ಇಲಾಖೆ ಪರಿಚಯಿಸಿತ್ತು. ಆದರೆ, ಆಯುಷ್ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕೆಲ ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆ ಮತ್ತು ಕಚೇರಿಗೆ ತೆರಳದೆ, ಆಪ್ತರ ನೆರವಿನಿಂದ ತಮ್ಮ ಹಾಜರಿ ಹಾಕಿಸುತ್ತಿದ್ದಾರೆ. ಇದರಿಂದಾಗಿ ಹಾಜರಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಹಾಗೂ ವೈದ್ಯರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಆಶಯಕ್ಕೆ ಹಿನ್ನಡೆಯಾಗಿದೆ. </p>.<p>84 ಮಂದಿ ಈ ರೀತಿ ಅನ್ಯ ಮಾರ್ಗ ಕಂಡುಕೊಂಡು ಹಾಜರಿ ಹಾಕಿದ್ದಾರೆ. ಅವರಲ್ಲಿ ವೈದ್ಯಕೀಯ ಅಧೀಕ್ಷಕರು, ವೈದ್ಯಾಧಿಕಾರಿಗಳ ಜತೆಗೆ, ಇಲಾಖೆಯ ಸಹಾಯಕ ಆಡಳಿತಾಧಿಕಾರಿಗಳೂ ಸೇರಿದ್ದಾರೆ. ಅವರು ತಮ್ಮ ಗುರುತಿನ ಸಂಖ್ಯೆ, ಮುಖವನ್ನು ಗುರುತಿಸಲು ನೆರವಾಗುವ ಫೋಟೊಗಳು, ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಈ ರೀತಿ, ಇನ್ನೊಬ್ಬರಿಂದ ಹಾಜರಿ ಹಾಕಿಸುತ್ತಿರುವುದು ದೃಢಪಟ್ಟಿದೆ. ಕರ್ತವ್ಯಕ್ಕೆ ಹಾಜರಾಗದೆ, ಬೇರೆ ಮಾರ್ಗದಿಂದ ಹಾಜರಿ ಹಾಕುತ್ತಿರುವವರಿಗೆ ಇಲಾಖೆ ಆಯುಕ್ತರಾದ ಸುನೀಲ್ ಪನ್ವಾರ್ ಅವರು ಎಚ್ಚರಿಕೆಯ ನೋಟಿಸ್ ನೀಡಿದ್ದಾರೆ. </p>.<p><strong>ಮುಖಚರ್ಯೆ ಆಧಾರಿತ ವ್ಯವಸ್ಥೆ:</strong> ಈ ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ಯಂತ್ರದ ಮುಂದೆ ಸರತಿ ಸಾಲಿನಲ್ಲಿ ನಿಂತು, ಬೆರಳಚ್ಚು ಒತ್ತಬೇಕಾಗಿತ್ತು. ಆದ್ದರಿಂದ ಮೊಬೈಲ್ ಫೋನ್ ಮೂಲಕವೇ ಹಾಜರಾತಿ ದಾಖಲಿಸಲು ‘ಕರ್ತವ್ಯ’ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಇದು ಮುಖಚರ್ಯೆ ಆಧಾರಿತ ವ್ಯವಸ್ಥೆಯಾಗಿದೆ.</p>.<p>‘ಆಯುಷ್ ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಒಂದು ಮೊಬೈಲ್ ಫೋನ್ ಅನ್ನು ಆಪ್ತರಿಗೆ ನೀಡಿ, ನಿಗದಿತ ಸ್ಥಳದಲ್ಲಿ ‘ಲಾಗ್ ಇನ್’ ಮತ್ತು ‘ಲಾಗ್ ಔಟ್’ ಆಗಲು ಸೂಚಿಸುತ್ತಿದ್ದರು. ಮುಖಚರ್ಯೆ ನೀಡುವ ಆಯ್ಕೆ ತೆರೆದುಕೊಂಡಾಗ, ಆಪ್ತರ ಮೊಬೈಲ್ ಫೋನ್ ಮೂಲಕ ಫೋಟೊ ಅಥವಾ ವಿಡಿಯೊ ಪ್ರದರ್ಶಿಸುತ್ತಿದ್ದರು. ಹೀಗೆ ಹಾಜರಿ ಹಾಕುತ್ತಿದ್ದಾರೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ. </p>.<p>‘ಆಯುಷ್ ಇಲಾಖೆಯಡಿ ರಾಜ್ಯದ ವಿವಿಧೆಡೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಅಂತಹ ಆಸ್ಪತ್ರೆಗಳು ಈಗಾಗಲೇ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಹೀಗಿರುವಾಗ ಲಭ್ಯ ವೈದ್ಯರು ಸೇವೆಗೆ ಗೈರಾಗಿ, ಬೇರೆಯವರಿಂದ ಹಾಜರಿ ಹಾಕಿಸುತ್ತಿರುವುದು ವೈದ್ಯಕೀಯ ಸೇವೆಗೆ ಹಿನ್ನಡೆಯಾಗಿದೆ. ಕೆಲವರು ಆಸ್ಪತ್ರೆಯಲ್ಲಿನ ಸಿಬ್ಬಂದಿಯನ್ನೇ ದುರ್ಬಳಕೆ ಮಾಡಿಕೊಂಡು, ಗೈರಾಗುತ್ತಿದ್ದಾರೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. </p>.<p><strong>ತಂತ್ರಾಂಶ ಕಾರ್ಯನಿರ್ವಹಣೆ ಹೇಗೆ?: </strong>ಅನಧಿಕೃತ ಗೈರು ತಡವಾಗಿ ಕಚೇರಿ ಅಥವಾ ಆಸ್ಪತ್ರೆಗೆ ಬರುವುದು ಬೇಗ ಹೊರಡುವುದಕ್ಕೆ ಕಡಿವಾಣ ಹಾಕುವ ಉದ್ದೇಶವನ್ನು ಹೊಸ ವ್ಯವಸ್ಥೆ ಹೊಂದಿದೆ. ಹಲವು ಇಲಾಖೆಯಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ. ಮೇ 1ರಿಂದ ಎಲ್ಲ ಇಲಾಖೆ ನಿಗಮ ಮಂಡಳಿ ನೌಕರರು ಇದೇ ವ್ಯವಸ್ಥೆಯಡಿ ಹಾಜರಿ ಹಾಕುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇದೇ 7 ರಂದು ಆದೇಶ ಹೊರಡಿಸಿದೆ. ಆ್ಯಪ್ ಡೌನ್ಲೋಡ್ ಮಾಡಿಕೊಂಡ ನಂತರ ಆಧಾರ್ ಅಂಕಿಗಳನ್ನು ನಮೂದಿಸಬೇಕು. ಬಳಿಕ ಅದರಲ್ಲಿ ಅವರ ಕೆಲಸಕ್ಕೆ ಸಂಬಂಧಿಸಿದ ವಿವರಗಳನ್ನು ಅಪ್ಲೋಡ್ ಮಾಡಬೇಕು. ಇದನ್ನು ಒಮ್ಮೆ ಮಾಡಿದರೆ ಸಾಕು ಎಲ್ಲ ಮಾಹಿತಿ ಅದರಲ್ಲಿ ಕಾಯಂ ಆಗಿ ಸಂಗ್ರಹವಾಗಿರುತ್ತದೆ. ಇದಾದ ಬಳಿಕ ಲಾಗ್ಇನ್ ಲಾಗ್ಔಟ್ ಮೊಬೈಲ್ ಆ್ಯಪ್ ಮೂಲಕವೇ ದಾಖಲಾಗುತ್ತದೆ. ನಿಗದಿತ ಸ್ಥಳಕ್ಕೆ ಹೋದಲ್ಲಿ ಮಾತ್ರ ಹಾಜರಾತಿ ಹಾಕಲು ಸಾಧ್ಯವಾಗಲಿದೆ. ಚಲನವಲನದ ಮೇಲೆ ನಿಗಾ ಇಡಲು ಇದು ಸಹಕಾರಿಯಾಗಿದೆ. </p>.<p> <strong>‘ಶಿಸ್ತುಕ್ರಮ ಕೈಗೊಳ್ಳಲಾಗುವುದು’: </strong> ‘ಕೆಎಎಂಎಸ್ ತಂತ್ರಾಂಶದಲ್ಲಿ ಹಾಜರಾತಿ ದಾಖಲಿಸುವಾಗ ಕೆಲವರು ಫೋಟೊ ಪ್ರತಿ ಬಳಸುತ್ತಿರುವುದು ಕೆಎಎಂಎಸ್ ವಿಶ್ಲೇಷಣೆಯಿಂದ ದೃಢಪಟ್ಟಿದೆ. ಐಡಿ ಅಥವಾ ಫೋಟೊಗಳನ್ನು ಇನ್ನಿತರೆ ಅನಧಿಕೃತ ಮಾರ್ಗಗಳನ್ನು ಬಳಿಸಿ ಹಾಜರಾತಿ ದಾಖಲಿಸುವ ದುರ್ವರ್ತನೆ ತೋರಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ್ದೀರಿ. ಇನ್ನುಮುಂದೆ ಈ ರೀತಿ ಪುನರಾವರ್ತನೆಯಾಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಪುನರಾವರ್ತನೆಯಾದಲ್ಲಿ ನಿಯಮಾನುಸಾರ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಆಯುಷ್ ಇಲಾಖೆ ಆಯುಕ್ತ ಸುನೀಲ್ ಪನ್ವಾರ್ ಅವರು ತಪ್ಪು ಮಾಡಿದವರಿಗೆ ನೀಡಿದ ನೋಟಿಸ್ನಲ್ಲಿ ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೃತಕ ಬುದ್ಧಿಮತ್ತೆ (ಎ.ಐ) ಮತ್ತು ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಆಧರಿಸಿದ ನೂತನ ಹಾಜರಾತಿ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ವಾಮಮಾರ್ಗ ಹಿಡಿದಿರುವ ಕೆಲವು ಆಯುಷ್ ವೈದ್ಯರು ಹಾಗೂ ಸಿಬ್ಬಂದಿ, ಛಾಯಾಚಿತ್ರ ಬಳಸಿ ಹಾಜರಿ ಹಾಕಿ, ಕರ್ತವ್ಯಕ್ಕೆ ಗೈರಾಗುತ್ತಿರುವ ಕೃತ್ಯ ಪತ್ತೆಯಾಗಿದೆ. </p>.<p>ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯ (ಕೆಎಎಂಎಸ್) ವಿಶ್ಲೇಷಣೆಯಿಂದ ವೈದ್ಯರು, ಸಿಬ್ಬಂದಿಯ ಕಳ್ಳ ಚಟುವಟಿಕೆ ದೃಢಪಟ್ಟಿದೆ. </p>.<p>ಹಾಜರಾತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಮೊಬೈಲ್ ಫೋನ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು (ಕರ್ತವ್ಯ) ಕಳೆದ ವರ್ಷ ಜಾರಿ ಮಾಡಿದೆ. ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ದೋಷಗಳು ಕಾಣಿಸಿಕೊಳ್ಳುತ್ತಿದ್ದ ಕಾರಣ, ಮೊಬೈಲ್ ಆಧಾರಿತ ಇ–ಹಾಜರಾತಿ ವ್ಯವಸ್ಥೆಯನ್ನು ಇಲಾಖೆ ಪರಿಚಯಿಸಿತ್ತು. ಆದರೆ, ಆಯುಷ್ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕೆಲ ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆ ಮತ್ತು ಕಚೇರಿಗೆ ತೆರಳದೆ, ಆಪ್ತರ ನೆರವಿನಿಂದ ತಮ್ಮ ಹಾಜರಿ ಹಾಕಿಸುತ್ತಿದ್ದಾರೆ. ಇದರಿಂದಾಗಿ ಹಾಜರಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಹಾಗೂ ವೈದ್ಯರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಆಶಯಕ್ಕೆ ಹಿನ್ನಡೆಯಾಗಿದೆ. </p>.<p>84 ಮಂದಿ ಈ ರೀತಿ ಅನ್ಯ ಮಾರ್ಗ ಕಂಡುಕೊಂಡು ಹಾಜರಿ ಹಾಕಿದ್ದಾರೆ. ಅವರಲ್ಲಿ ವೈದ್ಯಕೀಯ ಅಧೀಕ್ಷಕರು, ವೈದ್ಯಾಧಿಕಾರಿಗಳ ಜತೆಗೆ, ಇಲಾಖೆಯ ಸಹಾಯಕ ಆಡಳಿತಾಧಿಕಾರಿಗಳೂ ಸೇರಿದ್ದಾರೆ. ಅವರು ತಮ್ಮ ಗುರುತಿನ ಸಂಖ್ಯೆ, ಮುಖವನ್ನು ಗುರುತಿಸಲು ನೆರವಾಗುವ ಫೋಟೊಗಳು, ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಈ ರೀತಿ, ಇನ್ನೊಬ್ಬರಿಂದ ಹಾಜರಿ ಹಾಕಿಸುತ್ತಿರುವುದು ದೃಢಪಟ್ಟಿದೆ. ಕರ್ತವ್ಯಕ್ಕೆ ಹಾಜರಾಗದೆ, ಬೇರೆ ಮಾರ್ಗದಿಂದ ಹಾಜರಿ ಹಾಕುತ್ತಿರುವವರಿಗೆ ಇಲಾಖೆ ಆಯುಕ್ತರಾದ ಸುನೀಲ್ ಪನ್ವಾರ್ ಅವರು ಎಚ್ಚರಿಕೆಯ ನೋಟಿಸ್ ನೀಡಿದ್ದಾರೆ. </p>.<p><strong>ಮುಖಚರ್ಯೆ ಆಧಾರಿತ ವ್ಯವಸ್ಥೆ:</strong> ಈ ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ಯಂತ್ರದ ಮುಂದೆ ಸರತಿ ಸಾಲಿನಲ್ಲಿ ನಿಂತು, ಬೆರಳಚ್ಚು ಒತ್ತಬೇಕಾಗಿತ್ತು. ಆದ್ದರಿಂದ ಮೊಬೈಲ್ ಫೋನ್ ಮೂಲಕವೇ ಹಾಜರಾತಿ ದಾಖಲಿಸಲು ‘ಕರ್ತವ್ಯ’ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಇದು ಮುಖಚರ್ಯೆ ಆಧಾರಿತ ವ್ಯವಸ್ಥೆಯಾಗಿದೆ.</p>.<p>‘ಆಯುಷ್ ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಒಂದು ಮೊಬೈಲ್ ಫೋನ್ ಅನ್ನು ಆಪ್ತರಿಗೆ ನೀಡಿ, ನಿಗದಿತ ಸ್ಥಳದಲ್ಲಿ ‘ಲಾಗ್ ಇನ್’ ಮತ್ತು ‘ಲಾಗ್ ಔಟ್’ ಆಗಲು ಸೂಚಿಸುತ್ತಿದ್ದರು. ಮುಖಚರ್ಯೆ ನೀಡುವ ಆಯ್ಕೆ ತೆರೆದುಕೊಂಡಾಗ, ಆಪ್ತರ ಮೊಬೈಲ್ ಫೋನ್ ಮೂಲಕ ಫೋಟೊ ಅಥವಾ ವಿಡಿಯೊ ಪ್ರದರ್ಶಿಸುತ್ತಿದ್ದರು. ಹೀಗೆ ಹಾಜರಿ ಹಾಕುತ್ತಿದ್ದಾರೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ. </p>.<p>‘ಆಯುಷ್ ಇಲಾಖೆಯಡಿ ರಾಜ್ಯದ ವಿವಿಧೆಡೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಅಂತಹ ಆಸ್ಪತ್ರೆಗಳು ಈಗಾಗಲೇ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಹೀಗಿರುವಾಗ ಲಭ್ಯ ವೈದ್ಯರು ಸೇವೆಗೆ ಗೈರಾಗಿ, ಬೇರೆಯವರಿಂದ ಹಾಜರಿ ಹಾಕಿಸುತ್ತಿರುವುದು ವೈದ್ಯಕೀಯ ಸೇವೆಗೆ ಹಿನ್ನಡೆಯಾಗಿದೆ. ಕೆಲವರು ಆಸ್ಪತ್ರೆಯಲ್ಲಿನ ಸಿಬ್ಬಂದಿಯನ್ನೇ ದುರ್ಬಳಕೆ ಮಾಡಿಕೊಂಡು, ಗೈರಾಗುತ್ತಿದ್ದಾರೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. </p>.<p><strong>ತಂತ್ರಾಂಶ ಕಾರ್ಯನಿರ್ವಹಣೆ ಹೇಗೆ?: </strong>ಅನಧಿಕೃತ ಗೈರು ತಡವಾಗಿ ಕಚೇರಿ ಅಥವಾ ಆಸ್ಪತ್ರೆಗೆ ಬರುವುದು ಬೇಗ ಹೊರಡುವುದಕ್ಕೆ ಕಡಿವಾಣ ಹಾಕುವ ಉದ್ದೇಶವನ್ನು ಹೊಸ ವ್ಯವಸ್ಥೆ ಹೊಂದಿದೆ. ಹಲವು ಇಲಾಖೆಯಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ. ಮೇ 1ರಿಂದ ಎಲ್ಲ ಇಲಾಖೆ ನಿಗಮ ಮಂಡಳಿ ನೌಕರರು ಇದೇ ವ್ಯವಸ್ಥೆಯಡಿ ಹಾಜರಿ ಹಾಕುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇದೇ 7 ರಂದು ಆದೇಶ ಹೊರಡಿಸಿದೆ. ಆ್ಯಪ್ ಡೌನ್ಲೋಡ್ ಮಾಡಿಕೊಂಡ ನಂತರ ಆಧಾರ್ ಅಂಕಿಗಳನ್ನು ನಮೂದಿಸಬೇಕು. ಬಳಿಕ ಅದರಲ್ಲಿ ಅವರ ಕೆಲಸಕ್ಕೆ ಸಂಬಂಧಿಸಿದ ವಿವರಗಳನ್ನು ಅಪ್ಲೋಡ್ ಮಾಡಬೇಕು. ಇದನ್ನು ಒಮ್ಮೆ ಮಾಡಿದರೆ ಸಾಕು ಎಲ್ಲ ಮಾಹಿತಿ ಅದರಲ್ಲಿ ಕಾಯಂ ಆಗಿ ಸಂಗ್ರಹವಾಗಿರುತ್ತದೆ. ಇದಾದ ಬಳಿಕ ಲಾಗ್ಇನ್ ಲಾಗ್ಔಟ್ ಮೊಬೈಲ್ ಆ್ಯಪ್ ಮೂಲಕವೇ ದಾಖಲಾಗುತ್ತದೆ. ನಿಗದಿತ ಸ್ಥಳಕ್ಕೆ ಹೋದಲ್ಲಿ ಮಾತ್ರ ಹಾಜರಾತಿ ಹಾಕಲು ಸಾಧ್ಯವಾಗಲಿದೆ. ಚಲನವಲನದ ಮೇಲೆ ನಿಗಾ ಇಡಲು ಇದು ಸಹಕಾರಿಯಾಗಿದೆ. </p>.<p> <strong>‘ಶಿಸ್ತುಕ್ರಮ ಕೈಗೊಳ್ಳಲಾಗುವುದು’: </strong> ‘ಕೆಎಎಂಎಸ್ ತಂತ್ರಾಂಶದಲ್ಲಿ ಹಾಜರಾತಿ ದಾಖಲಿಸುವಾಗ ಕೆಲವರು ಫೋಟೊ ಪ್ರತಿ ಬಳಸುತ್ತಿರುವುದು ಕೆಎಎಂಎಸ್ ವಿಶ್ಲೇಷಣೆಯಿಂದ ದೃಢಪಟ್ಟಿದೆ. ಐಡಿ ಅಥವಾ ಫೋಟೊಗಳನ್ನು ಇನ್ನಿತರೆ ಅನಧಿಕೃತ ಮಾರ್ಗಗಳನ್ನು ಬಳಿಸಿ ಹಾಜರಾತಿ ದಾಖಲಿಸುವ ದುರ್ವರ್ತನೆ ತೋರಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ್ದೀರಿ. ಇನ್ನುಮುಂದೆ ಈ ರೀತಿ ಪುನರಾವರ್ತನೆಯಾಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಪುನರಾವರ್ತನೆಯಾದಲ್ಲಿ ನಿಯಮಾನುಸಾರ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಆಯುಷ್ ಇಲಾಖೆ ಆಯುಕ್ತ ಸುನೀಲ್ ಪನ್ವಾರ್ ಅವರು ತಪ್ಪು ಮಾಡಿದವರಿಗೆ ನೀಡಿದ ನೋಟಿಸ್ನಲ್ಲಿ ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>