ಮುಖ್ಯಮಂತ್ರಿ ಗೃಹ ನಿವಾಸ ‘ಕೃಷ್ಣಾ’ದಲ್ಲಿ ರೈತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ರೈತರನ್ನು ಪೀಡಿಸುತ್ತಿರುವ ಇಂತಹ ಸಂಸ್ಥೆಗಳ ಬಗ್ಗೆ ವರದಿ ತರಿಸಿಕೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ತಿಳಿಸಿದರು. ಇಂತಹ ಪ್ರಕರಣಗಳ ಬಗ್ಗೆ ರೈತ ಮುಖಂಡರು ಮಾಹಿತಿ ನೀಡಿದ ತಕ್ಷಣವೇ, ರಾಯಚೂರು ಜಿಲ್ಲಾಧಿಕಾರಿಗೆ ಕರೆ ಮಾಡಿದ ಸಿ.ಎಂ ‘ಜಿಲ್ಲೆಯಲ್ಲಿ ರೈತರಿಗೆ ಕಿರು ಹಣಕಾಸು ಸಂಸ್ಥೆಗಳು ನೀಡುತ್ತಿರುವ ಕಿರುಕುಳಕ್ಕೆ ಕೂಡಲೇ ಕಡಿವಾಣ ಹಾಕಬೇಕು’ ಎಂದೂ ತಾಕೀತು ಮಾಡಿದರು.