ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ಪಡೆದಿದ್ದ ಕಾರುಗಳನ್ನೇ ಮಾರಿದವರ ಬಂಧನ

Last Updated 6 ಜನವರಿ 2022, 20:17 IST
ಅಕ್ಷರ ಗಾತ್ರ

ಬೆಂಗಳೂರು: ಟ್ರಾವೆಲ್ಸ್ ಏಜೆನ್ಸಿಗಾಗಿ ಗುತ್ತಿಗೆ ಪಡೆದಿದ್ದ ವಿವಿಧ ಕಂಪನಿಯ ಒಟ್ಟು 108 ಕಾರುಗಳನ್ನು ಮಾರಾಟ ಮಾಡಿ ಪರಾರಿಯಾಗಿದ್ದ ನಾಲ್ವರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಶಿವರಾಜ್‌, ಕೃಷ್ಣೇಗೌಡ, ಶ್ರೀಕಾಂತ್‌ ಹಾಗೂ ಅಸ್ಗರ್‌ ಬಂಧಿತರು. ಆರೋಪಿಗಳು ಆರ್‌.ಎಸ್‌.ಟ್ರಾವೆಲ್ಸ್‌ ಹೆಸರಿನ ಏಜೆನ್ಸಿಯೊಂದನ್ನು ನಡೆಸುತ್ತಿದ್ದರು. ಒಪ್ಪಂದದ ಮೇಲೆ 108 ಕಾರುಗಳನ್ನು ಪಡೆದುಕೊಂಡಿದ್ದ ಅವರು ವಾಹನಗಳ ಮಾಲೀಕರಿಗೆ ತಿಂಗಳಿಗೆ ಇಂತಿಷ್ಟು ಹಣ ನೀಡುವುದಾಗಿ ಹೇಳಿದ್ದರು. ಕೆಲ ತಿಂಗಳು ಮಾಲೀಕರಿಗೆಲ್ಲಾಸರಿಯಾದ ಸಮಯಕ್ಕೇ ಹಣ ತಲುಪಿಸಿ ನಂಬಿಕೆ ಗಳಿಸಿದ್ದರು. ಬಳಿಕ ಎಲ್ಲಾ ವಾಹನಗಳನ್ನೂ ಮಾರಾಟ ಮಾಡಿ ಪರಾರಿಯಾಗಿದ್ದರು. ಬಂಧಿತರಿಂದ 97 ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT