‘ಶಿವರಾಜ್, ಕೃಷ್ಣೇಗೌಡ, ಶ್ರೀಕಾಂತ್ ಹಾಗೂ ಅಸ್ಗರ್ ಬಂಧಿತರು. ಆರೋಪಿಗಳು ಆರ್.ಎಸ್.ಟ್ರಾವೆಲ್ಸ್ ಹೆಸರಿನ ಏಜೆನ್ಸಿಯೊಂದನ್ನು ನಡೆಸುತ್ತಿದ್ದರು. ಒಪ್ಪಂದದ ಮೇಲೆ 108 ಕಾರುಗಳನ್ನು ಪಡೆದುಕೊಂಡಿದ್ದ ಅವರು ವಾಹನಗಳ ಮಾಲೀಕರಿಗೆ ತಿಂಗಳಿಗೆ ಇಂತಿಷ್ಟು ಹಣ ನೀಡುವುದಾಗಿ ಹೇಳಿದ್ದರು. ಕೆಲ ತಿಂಗಳು ಮಾಲೀಕರಿಗೆಲ್ಲಾಸರಿಯಾದ ಸಮಯಕ್ಕೇ ಹಣ ತಲುಪಿಸಿ ನಂಬಿಕೆ ಗಳಿಸಿದ್ದರು. ಬಳಿಕ ಎಲ್ಲಾ ವಾಹನಗಳನ್ನೂ ಮಾರಾಟ ಮಾಡಿ ಪರಾರಿಯಾಗಿದ್ದರು. ಬಂಧಿತರಿಂದ 97 ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.