ಮೊದಲ ದಿನ ಆರು ಬೋಗಿಗಳ ಒಂದು ರೈಲು ಸಂಚರಿಸಿದೆ. ಶೀಘ್ರವೇ ಮತ್ತೊಂದು ರೈಲು ಸಂಚರಿಸಲಿದೆ. ಇಂತಿಷ್ಟೇ ಅವಧಿ ಎಂದು ನಿಗದಿಪಡಿಸಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಸದ್ಯಕ್ಕೆ ವೈಟ್ಫೀಲ್ಡ್– ಪಟ್ಟಂದೂರು ಅಗ್ರಹಾರ ನಡುವೆಯಷ್ಟೇ ಪರೀಕ್ಷಾರ್ಥ ಸಂಚಾರ ನಡೆಯಲಿದೆ. ಗರುಡಾಚಾರ್ ಪಾಳ್ಯ ತನಕ ಟ್ರ್ಯಾಕ್ ಮತ್ತು ಸಿಗ್ನಲಿಂಗ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮುಂದಿನ ವಾರದಲ್ಲಿ ಗರುಡಾಚಾರ್ ಪಾಳ್ಯದ ತನಕ ರೈಲುಗಳ ಸಂಚರಿಸಲಿವೆ.ಕೆಲವೇ ದಿನಗಳಲ್ಲಿ ಬೈಯಪ್ಪನಹಳ್ಳಿ ತನಕ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ’ ಎಂದು ಅಂಜುಂ ಪರ್ವೇಜ್ ‘ಪ್ರಜಾವಾಣಿ’ಗೆ ತಿಳಿಸಿದರು.