ಹೀಗೆ ಸಮರ್ಥರನ್ನು ಆಯ್ಕೆಮಾಡಿಕೊಳ್ಳುವ ಜವಾಬ್ದಾರಿ ಇರುವ ನಾವು, ‘ನೋಟಾ’ಕ್ಕೆ ಮತ ಚಲಾಯಿಸುವುದರಿಂದ ಸಾಧಿಸುವುದಾದರೂ ಏನನ್ನು?
ಸದಾಶಿವ ಆಯೋಗದ ವರದಿ ಜಾರಿ ಮಾಡದಿರುವ ಕಾರಣಕ್ಕೆ ನೋಟಾಗೆ ಮತ ಚಲಾಯಿಸಿ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಾಹೀರಾತಿನ ಮೂಲಕ ಸಮುದಾಯದವರನ್ನು ಕೇಳಿಕೊಂಡಿದೆ. ಉತ್ತರ ಕರ್ನಾಟಕ ಭಾಗದ ರೈತ ಹೋರಾಟಗಾರರು, ಮಹದಾಯಿ ಸಮಸ್ಯೆ ಪರಿಹಾರವಾಗದ ಕಾರಣಕ್ಕೆ ನೋಟಾಗೆ ಮತಹಾಕುವಂತೆ ರೈತರಿಗೆ ಮನವಿ ಮಾಡಿದ್ದಾರೆ (ಪ್ರ.ವಾ., ಮೇ 8). ಹೀಗೆ ನೋಟಾದ ಮೂಲಕ ಆಕ್ರೋಶ ವ್ಯಕ್ತಪಡಿಸಬಹುದೇ ವಿನಾ ಸಮಸ್ಯೆಗಳಿಗೆ ಖಂಡಿತ ಅದು ಪರಿಹಾರ ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.