<p><strong>ಬೆಂಗಳೂರು:</strong> ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ನಿರ್ಮಿಸುತ್ತಿರುವ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿಲೋ ಮೀಟರ್ ಉದ್ದದ ಪ್ರಮುಖ ಮುಖ್ಯರಸ್ತೆ (ಮೇಜರ್ ಆರ್ಟೀರಿಯರ್ ರೋಡ್–ಎಂಎಆರ್) ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಹದಿನೈದು ದಿನಗಳಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ.</p>.<p>ಪ್ರಾಧಿಕಾರವು 2018ರಲ್ಲಿ ಯೋಜನೆ ಆರಂಭಿಸಿದ್ದು, 300 ಅಡಿ ಅಗಲದ ದಶಪಥ ರಸ್ತೆಯಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲ 9 ಬ್ಲಾಕ್ಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸಲಿದೆ. ಅಲ್ಲದೇ ಮಾಗಡಿ ರಸ್ತೆ (ಕಡಬಗೆರೆ ಕ್ರಾಸ್) ಮತ್ತು ಮೈಸೂರು ರಸ್ತೆ (ಚಲ್ಲಘಟ್ಟ ಮೆಟ್ರೊ ಡಿಪೊ) ಸಂಪರ್ಕ ಕೂಡ ಸುಲಭವಾಗಲಿದೆ.</p>.<p>ಎಂಎಆರ್ನಲ್ಲಿ 2.90 ಕಿ.ಮೀ, 5.10 ಕಿ.ಮೀ. ಹಾಗೂ 9.70 ಕಿ.ಮೀನಲ್ಲಿ ಅಂಡರ್ಪಾಸ್ ನಿರ್ಮಾಣವಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎಂಎಆರ್ನಲ್ಲಿ 64 ಕಿರು ಸೇತುವೆ, ಚಲ್ಲಘಟ್ಟದ ಬಳಿ 250 ಮೀಟರ್ ಉದ್ದದ ಸುರಂಗ ರಸ್ತೆ ನಿರ್ಮಾಣದ ಜೊತೆಗೆ ರೈಲು ಕೆಳಸೇತುವೆ ಸಹ ಒಳಗೊಂಡಿದೆ.</p>.<p>ಈ ರಸ್ತೆ ನಿರ್ಮಾಣಕ್ಕೆ 321.21 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು, ಆರಂಭಿಕ ವೆಚ್ಚ ₹465 ಕೋಟಿ ಎಂದು ಯೋಜಿಸಲಾಗಿತ್ತು. ಈ ವರೆಗೆ ₹631 ಕೋಟಿ ವೆಚ್ಚ ಮಾಡಲಾಗಿದೆ.</p>.<p>ಈ ರಸ್ತೆಯು ಕಂಬಿಪುರ, ಕೆ.ಕೃಷ್ಣಸಾಗರ, ಭೀಮನ ಕುಪ್ಪೆ, ಕೊಮ್ಮಘಟ್ಟ, ಕಂಚನಪುರ ಮತ್ತು ಸುಳಿಕೆರೆ ಗ್ರಾಮಗಳ ಮೂಲಕ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ವಾಹನ ಚಾಲಕರಿಗೆ ಉಚಿತ ಪ್ರವೇಶವಿದೆ. </p>.<p>ಪ್ರಸ್ತುತ ಕೆಲ ರಸ್ತೆಗಳಿಗೆ ಡಾಂಬರೀಕರಣ, ಮಾರ್ಕಿಂಗ್ ಹಾಗೂ ಪೇಯಿಂಟ್ ಕೆಲಸ ನಡೆಯುತ್ತಿದ್ದು, ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಈ ರಸ್ತೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೆಸರಿಡಲಾಗಿದೆ. </p>.<p>‘ಎಂಎಆರ್ ರಸ್ತೆಗೆ ಎರಡು ಕಿಲೋ ಮೀಟರ್ ದೂರದಲ್ಲಿ ನೈಸ್ ರಸ್ತೆಯು ಹಾದು ಹೋಗಿದೆ. ಹಾಸನ ಮತ್ತು ಕುಣಿಗಲ್ನಿಂದ ಮಾಗಡಿ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಹಾಗೂ ಮಂಡ್ಯ ಮತ್ತು ರಾಮನಗರ ಕಡೆಯಿಂದ ಬಿಡದಿ ಮೂಲಕ ಬರುವ ಪ್ರಯಾಣಿಕರಿಗೆ ಎಂಎಆರ್ ಪ್ರಯೋಜನವಾಗಲಿದೆ. ಈ ಯೋಜನೆ ಅನುಷ್ಠಾನದಿಂದ ದಕ್ಷಿಣ ಬೆಂಗಳೂರು–ಪಶ್ಚಿಮ ಬೆಂಗಳೂರು ನಡುವಿನ ಸಂಚಾರದ ಅಂತರ ಕಡಿಮೆಯಾಗಲಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ಜನವರಿಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ನಿರಂತರ ಮಳೆಯ ಪರಿಣಾಮ ಚಲ್ಲಘಟ್ಟ ಬಳಿಯ ರೈಲ್ವೆ ಅಂಡರ್ ಪಾಸ್ನಲ್ಲಿ ಕಾಮಗಾರಿ ಸಾಧ್ಯವಾಗಿರಲಿಲ್ಲ. ಅಲ್ಲದೇ ಗರ್ಡರ್ಗೆ ಸಂಬಂಧಿಸಿದ ಕೆಲಸ ಪ್ರಾರಂಭಿಸಲು ರೈಲ್ವೆ ಇಲಾಖೆಯು ಅನುಮತಿ ನೀಡುವುದು ವಿಳಂಬವಾಗಿತ್ತು. ಹಲವು ತಾಂತ್ರಿಕ ಅಡಚಣೆ ಎದುರಾಗಿತ್ತು. ಹೆಚ್ಚುವರಿ ಕೆಲಸಗಾರರನ್ನು ನಿಯೋಜಿಸಿ, ನಿರಂತರವಾಗಿ ಕಾಮಗಾರಿ ಕೈಗೊಳ್ಳಲಾಯಿತು. 17 ಕಡೆ ಸರ್ವಿಸ್ ರಸ್ತೆಗಳಿಗೆ ಸಂಪರ್ಕ ನೀಡಲಾಗಿದ್ದು, ಡಕ್ಟ್ ಮತ್ತು ಯುಟಿಲಿಟಿ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹೇಳಿದರು.</p>.<p>‘ಪಿಎಆರ್ಆರ್–2 ಅಂತಿಮವಾಗಿ ಹೊಸೂರು ರಸ್ತೆಯನ್ನು ಬೆಂಗಳೂರು–ಮೈಸೂರು ರಸ್ತೆ ಮತ್ತು ಎಂಎಆರ್ ಸಂಪರ್ಕಿಸುತ್ತದೆ. ಇದರಿಂದ ನಗರದ ಹೊರ ಸಾರಿಗೆ ಜಾಲದಲ್ಲಿನ ದಟ್ಟಣೆ ಕಡಿಮೆಯಾಗಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ನಿರ್ಮಿಸುತ್ತಿರುವ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿಲೋ ಮೀಟರ್ ಉದ್ದದ ಪ್ರಮುಖ ಮುಖ್ಯರಸ್ತೆ (ಮೇಜರ್ ಆರ್ಟೀರಿಯರ್ ರೋಡ್–ಎಂಎಆರ್) ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಹದಿನೈದು ದಿನಗಳಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ.</p>.<p>ಪ್ರಾಧಿಕಾರವು 2018ರಲ್ಲಿ ಯೋಜನೆ ಆರಂಭಿಸಿದ್ದು, 300 ಅಡಿ ಅಗಲದ ದಶಪಥ ರಸ್ತೆಯಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲ 9 ಬ್ಲಾಕ್ಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸಲಿದೆ. ಅಲ್ಲದೇ ಮಾಗಡಿ ರಸ್ತೆ (ಕಡಬಗೆರೆ ಕ್ರಾಸ್) ಮತ್ತು ಮೈಸೂರು ರಸ್ತೆ (ಚಲ್ಲಘಟ್ಟ ಮೆಟ್ರೊ ಡಿಪೊ) ಸಂಪರ್ಕ ಕೂಡ ಸುಲಭವಾಗಲಿದೆ.</p>.<p>ಎಂಎಆರ್ನಲ್ಲಿ 2.90 ಕಿ.ಮೀ, 5.10 ಕಿ.ಮೀ. ಹಾಗೂ 9.70 ಕಿ.ಮೀನಲ್ಲಿ ಅಂಡರ್ಪಾಸ್ ನಿರ್ಮಾಣವಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎಂಎಆರ್ನಲ್ಲಿ 64 ಕಿರು ಸೇತುವೆ, ಚಲ್ಲಘಟ್ಟದ ಬಳಿ 250 ಮೀಟರ್ ಉದ್ದದ ಸುರಂಗ ರಸ್ತೆ ನಿರ್ಮಾಣದ ಜೊತೆಗೆ ರೈಲು ಕೆಳಸೇತುವೆ ಸಹ ಒಳಗೊಂಡಿದೆ.</p>.<p>ಈ ರಸ್ತೆ ನಿರ್ಮಾಣಕ್ಕೆ 321.21 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು, ಆರಂಭಿಕ ವೆಚ್ಚ ₹465 ಕೋಟಿ ಎಂದು ಯೋಜಿಸಲಾಗಿತ್ತು. ಈ ವರೆಗೆ ₹631 ಕೋಟಿ ವೆಚ್ಚ ಮಾಡಲಾಗಿದೆ.</p>.<p>ಈ ರಸ್ತೆಯು ಕಂಬಿಪುರ, ಕೆ.ಕೃಷ್ಣಸಾಗರ, ಭೀಮನ ಕುಪ್ಪೆ, ಕೊಮ್ಮಘಟ್ಟ, ಕಂಚನಪುರ ಮತ್ತು ಸುಳಿಕೆರೆ ಗ್ರಾಮಗಳ ಮೂಲಕ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ವಾಹನ ಚಾಲಕರಿಗೆ ಉಚಿತ ಪ್ರವೇಶವಿದೆ. </p>.<p>ಪ್ರಸ್ತುತ ಕೆಲ ರಸ್ತೆಗಳಿಗೆ ಡಾಂಬರೀಕರಣ, ಮಾರ್ಕಿಂಗ್ ಹಾಗೂ ಪೇಯಿಂಟ್ ಕೆಲಸ ನಡೆಯುತ್ತಿದ್ದು, ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಈ ರಸ್ತೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೆಸರಿಡಲಾಗಿದೆ. </p>.<p>‘ಎಂಎಆರ್ ರಸ್ತೆಗೆ ಎರಡು ಕಿಲೋ ಮೀಟರ್ ದೂರದಲ್ಲಿ ನೈಸ್ ರಸ್ತೆಯು ಹಾದು ಹೋಗಿದೆ. ಹಾಸನ ಮತ್ತು ಕುಣಿಗಲ್ನಿಂದ ಮಾಗಡಿ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಹಾಗೂ ಮಂಡ್ಯ ಮತ್ತು ರಾಮನಗರ ಕಡೆಯಿಂದ ಬಿಡದಿ ಮೂಲಕ ಬರುವ ಪ್ರಯಾಣಿಕರಿಗೆ ಎಂಎಆರ್ ಪ್ರಯೋಜನವಾಗಲಿದೆ. ಈ ಯೋಜನೆ ಅನುಷ್ಠಾನದಿಂದ ದಕ್ಷಿಣ ಬೆಂಗಳೂರು–ಪಶ್ಚಿಮ ಬೆಂಗಳೂರು ನಡುವಿನ ಸಂಚಾರದ ಅಂತರ ಕಡಿಮೆಯಾಗಲಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ಜನವರಿಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ನಿರಂತರ ಮಳೆಯ ಪರಿಣಾಮ ಚಲ್ಲಘಟ್ಟ ಬಳಿಯ ರೈಲ್ವೆ ಅಂಡರ್ ಪಾಸ್ನಲ್ಲಿ ಕಾಮಗಾರಿ ಸಾಧ್ಯವಾಗಿರಲಿಲ್ಲ. ಅಲ್ಲದೇ ಗರ್ಡರ್ಗೆ ಸಂಬಂಧಿಸಿದ ಕೆಲಸ ಪ್ರಾರಂಭಿಸಲು ರೈಲ್ವೆ ಇಲಾಖೆಯು ಅನುಮತಿ ನೀಡುವುದು ವಿಳಂಬವಾಗಿತ್ತು. ಹಲವು ತಾಂತ್ರಿಕ ಅಡಚಣೆ ಎದುರಾಗಿತ್ತು. ಹೆಚ್ಚುವರಿ ಕೆಲಸಗಾರರನ್ನು ನಿಯೋಜಿಸಿ, ನಿರಂತರವಾಗಿ ಕಾಮಗಾರಿ ಕೈಗೊಳ್ಳಲಾಯಿತು. 17 ಕಡೆ ಸರ್ವಿಸ್ ರಸ್ತೆಗಳಿಗೆ ಸಂಪರ್ಕ ನೀಡಲಾಗಿದ್ದು, ಡಕ್ಟ್ ಮತ್ತು ಯುಟಿಲಿಟಿ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹೇಳಿದರು.</p>.<p>‘ಪಿಎಆರ್ಆರ್–2 ಅಂತಿಮವಾಗಿ ಹೊಸೂರು ರಸ್ತೆಯನ್ನು ಬೆಂಗಳೂರು–ಮೈಸೂರು ರಸ್ತೆ ಮತ್ತು ಎಂಎಆರ್ ಸಂಪರ್ಕಿಸುತ್ತದೆ. ಇದರಿಂದ ನಗರದ ಹೊರ ಸಾರಿಗೆ ಜಾಲದಲ್ಲಿನ ದಟ್ಟಣೆ ಕಡಿಮೆಯಾಗಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>