ಬೆಂಗಳೂರು: ‘ಇದೇ 21ರಿಂದ ನಡೆಯಬೇಕಾದ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಎಲ್ಲ ಪರೀಕ್ಷೆಗಳನ್ನು ಕೋವಿಡ್ ಎರಡನೇ ಅಲೆ ತೀವ್ರಗೊಂಡಿರುವುದರಿಂದ ಮತ್ತು ಸಾರಿಗೆ ನೌಕರರ ಮುಷ್ಕರದ ಕಾರಣಕ್ಕೆ ಮುಂದೂಡಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ರಮೇಶ್ ಬಿ. ತಿಳಿಸಿದ್ದಾರೆ.
’ಇದೇ 21ರಿಂದ ಆರಂಭವಾಗಬೇಕಿದ್ದ ಎಂಸಿಎ ಕೋರ್ಸ್ (3ನೇ ಮತ್ತು 5ನೇ ಸೆಮಿಸ್ಟರ್) ಮತ್ತು ಎಂ.ಇಡಿ (3ನೇ ಸೆಮಿಸ್ಟರ್) ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಮುಂದೆ ಪ್ರಕಟಿಸಲಾಗುವುದು’ ಎಂದೂ ಅವರು ಹೇಳಿದ್ದಾರೆ.