ಹಣ ಎಲ್ಲಿದೆ ಯಾರು ಕೊಡುತ್ತಾರೆ?’
‘ಬಿ–ಸ್ಮೈಲ್ನಿಂದ 11 ಎಲಿವೇಟೆಡ್ ಕಾರಿಡಾರ್ಗಳನ್ನು ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ನಿಜ. ಆದರೆ ಬಿ–ಸ್ಮೈಲ್ಗೆ ಹಣ ಯಾರು ನೀಡುತ್ತಾರೆ ಎಂಬುದನ್ನೇ ತಿಳಿಸಿಲ್ಲ. ₹4000 ಕೋಟಿಯನ್ನು ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಬಿ–ಸ್ಮೈಲ್ಗೆ ನೀಡಲಾಗುತ್ತದೆ ಎಂದು 2025–26ನೇ ಸಾಲಿನ ಬಜೆಟ್ನಲ್ಲಿ ತಿಳಿಸಲಾಗಿತ್ತು. ಆದರೆ ಅದರಲ್ಲಿ ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಇನ್ನು 2026–27ನೇ ಸಾಲಿನ ಬಜೆಟ್ನಲ್ಲಿ ₹4000 ಕೋಟಿ ಸೇರಿದಂತೆ ಒಟ್ಟು ₹7 ಸಾವಿರ ಕೋಟಿ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಅಂದಾಜು ವೆಚ್ಚದ ಪುಸ್ತಕದಲ್ಲಿ ₹3 ಸಾವಿರ ಕೋಟಿ ನೀಡುವ ಬಗ್ಗೆ ಮಾತ್ರ ಮಾಹಿತಿ ಇದೆ. ಹೀಗಾಗಿ ಟೆಂಡರ್ ಕಾರ್ಯಾದೇಶಕ್ಕೇ ಮೇಲ್ಸೇತುವೆಗಳ ಪ್ರಕ್ರಿಯೆ ನಿಲ್ಲಲ್ಲಿದ್ದು ರಸ್ತೆಗಳನ್ನು ಹಾಳು ಮಾಡಿ ವರ್ಷಾನುಗಟ್ಟಲೆ ನಾಗರಿಕರಿಗೆ ಸಂಕಷ್ಟ ನೀಡುವ ಯೋಜನೆಗಳಾಗಲಿವೆ’ ಎಂದು ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ಹೇಳಿದರು.