<p><strong>ಬೆಂಗಳೂರು:</strong> ‘ಮನೆಯ ಕಸವನ್ನು ವಿಂಗಡಿಸಿಟ್ಟಿರುತ್ತೇವೆ, ಪಾಲಿಕೆಯವರು ಹೇಳಿದ ನಿಯಮವನ್ನೇ ಪಾಲಿಸಿರುತ್ತೇವೆ. ಆದರೆ ಕಸ ಸಂಗ್ರಹಿಸುವವರು ಬರುವುದಿಲ್ಲ. ಇಂತಹ ಲೋಪಕ್ಕೆ ನಗರ ಪಾಲಿಕೆಗಳು ದಂಡ ವಿಧಿಸುವುದಿಲ್ಲವೇ...’</p>.<p>ನಗರದ ಹಲವು ಬಡಾವಣೆಗಳ ನಾಗರಿಕರ ಪ್ರಶ್ನೆ ಇದು. </p>.<p>‘ಹಸಿ, ಒಣ, ನೈರ್ಮಲ್ಯ ಹಾಗೂ ವಿಶೇಷ ಕಾಳಜಿಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಇಡಿ; ಸರಿಯಾದ ಡಸ್ಟ್ಬಿನ್ ಬಳಸಿರಿ, ಮುಚ್ಚಿ ಇಡಿ; ಅಧಿಕೃತ ಸಂಗ್ರಹಕರಿಗೆ ಮಾತ್ರ ತ್ಯಾಜ್ಯ ಹಸ್ತಾಂತರಿಸಿ; ಸಾಧ್ಯವಾದರೆ ಹಸಿ ತ್ಯಾಜ್ಯವನ್ನು ಮನೆಯಲ್ಲೇ/ ಸಮುದಾಯದಲ್ಲಿ ಕಾಂಪೋಸ್ಟ್ ಮಾಡಿ; ಕಡಿಮೆ ಬಳಕೆ– ಮರು ಬಳಕೆ, ಮರು ಸಂಸ್ಕರಣೆ ಅನುಸರಿಸಿ... ಈ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಐದೂ ನಗರ ಪಾಲಿಕೆಗಳು ಪ್ರಚಾರ ಮಾಡುತ್ತಲೇ ಇವೆ. ಆದರೆ, ಅವರ ನಿಯಮಗಳೆಲ್ಲವನ್ನೂ ಪಾಲಿಸಿದರೂ ಮೂರ್ನಾಲ್ಕು ದಿನ ತ್ಯಾಜ್ಯ ಸಂಗ್ರಹಿಸುವುದೇ ಇಲ್ಲ. ಅವರಿಗೆ ಯಾವ ದಂಡ ವಿಧಿಸುತ್ತಿದ್ದೀರಿ ಹೇಳಿ’ ಎಂದು ಯಶವಂತಪುರ, ರಾಜರಾಜೇಶ್ವರಿನಗರ, ಜಯನಗರ, ಪದ್ಮನಾಭನಗರ, ಬಿಟಿಎಂ ಲೇಔಟ್, ಯಲಹಂಕ, ಬ್ಯಾಟರಾಯನಪುರದ ಹಲವು ನಾಗರಿಕರು ಪ್ರಶ್ನಿಸುತ್ತಾರೆ.</p>.<p>‘ಕಸ ಬಿಸಾಡಿದವರು, ವಿಂಗಡಿಸಿದವರಿಗೆ ದಂಡ ವಿಧಿಸಿ, ಫೋಟೊ ತೆಗೆಸಿಕೊಳ್ಳುವ ಮಾರ್ಷಲ್ಗಳು ಹಾಗೂ ಅಧಿಕಾರಿಗಳು, ಮನೆಮನೆಯಿಂದ ಕಸ ಸಂಗ್ರಹಿಸದವರ ಮೇಲೆ ಏಕೆ ಕ್ರಮ ಕೈಗೊಳ್ಳುವುದಿಲ್ಲ’ ಎಂಬುದು ಹಲವರ ಪ್ರಶ್ನೆಯಾಗಿದೆ. ಬಿಎಸ್ಡಬ್ಲ್ಯುಎಂಎಲ್ ಅಧಿಕಾರಿಗಳು ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.</p>.<p>‘ತ್ಯಾಜ್ಯ ವಿಂಗಡಿಸದಿದ್ದರೆ ಕೊಂಡೊಯ್ಯುವುದಿಲ್ಲ ಎನ್ನುತ್ತಾರೆ. ಎಲ್ಲ ರೀತಿಯ ವಿಂಗಡಣೆ ಮಾಡಿದರೂ, ಹಸಿ ಕಸವನ್ನು ನಿತ್ಯವೂ ಸಂಗ್ರಹಿಸುತ್ತಿಲ್ಲ. ಈ ಬಗ್ಗೆ ಸಹಾಯವಾಣಿಗೆ ದೂರು ನೀಡಿದರೆ, ಅಂದು ಅಥವಾ ಮುಂದಿನ ದಿನ ಸಂಗ್ರಹವಾಗುತ್ತದೆ. ಮತ್ತೆ ಅದೇ ಸ್ಥಿತಿ. ಅಲ್ಲದೆ, ‘ನಮ್ಮ ಮೇಲೆ ದೂರು ನೀಡಿದ್ದೀರಾ’ ಎಂದು ಕಸ ಸಂಗ್ರಹಿಸುವವರು ದಬಾಯಿಸುತ್ತಾರೆ. ಅವರಿಗೆ ಮಾತು ಕೊಡಲು ಸಾಧ್ಯವಿಲ್ಲ’ ಎಂದು ಜಯನಗರದ ನಿವಾಸಿ ವಿದ್ಯಾ ಹೇಳಿದರು.</p>.<p>‘ಮೊದಲು ಕಸದ ಸೆಸ್ ಎಂದು ಆಸ್ತಿ ತೆರಿಗೆಯಲ್ಲೇ ಪಡೆಯುತ್ತಿದ್ದರು. ಕಳೆದ ವರ್ಷದಿಂದ ಕಸದ ಸೇವಾ ತೆರಿಗೆ ಎಂದು ಸಾವಿರಾರು ರೂಪಾಯಿಯನ್ನು ಆಸ್ತಿ ತೆರಿಗೆಗೇ ಸೇರಿಸಿದ್ದಾರೆ. ಅಷ್ಟು ಕೊಟ್ಟರೆ ನಮ್ಮ ಬಡಾವಣೆ ಸ್ವಚ್ಛವಾಗುತ್ತದೆ ಎಂದು ನಂಬಿದ್ದೆವು, ಅದೂ ಇಲ್ಲ. ಹಿಂದಿಗಿಂತ ಕಸದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ, ಕಸ ಸಂಗ್ರಹಿಸುವವರಿಗೆ ಹಣ ಕೊಡದಿದ್ದರೆ ಅವರು ಮನೆ ಬಳಿ ಆಟೊ ನಿಲ್ಲಿಸುವುದೇ ಇಲ್ಲ. ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ. ಅಧಿಕಾರಿಗಳಿಗೆ ಹೇಳಿದರೆ ಅವರೂ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಈ ವ್ಯವಸ್ಥೆಯನ್ನು ಅಧಿಕಾರಿಗಳೇ ಸರಿಪಡಿಸದಿದ್ದರೆ ಹೇಗೆ? ಎಂದು ವಿಜಯನಗರದ ಗೌರಮ್ಮ ಪ್ರಶ್ನಿಸಿದರು.</p>.<p>‘ರಸ್ತೆಗಳಲ್ಲಿ ಕಸ ಎಸೆಯುವುದು ಸಾಮಾನ್ಯವಾಗಿಬಿಟ್ಟಿದೆ. ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗುವಂತೆ ಬೆಳಿಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ಕಸ ಸಂಗ್ರಹಿಸಲಾಗುತ್ತದೆ ಎಂದು ಬಿಎಸ್ಡಬ್ಲ್ಯುಎಂಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ, ಅಂತಹ ವ್ಯವಸ್ಥೆ ಎಲ್ಲೂ ಕಾಣುತ್ತಿಲ್ಲ. ಬೆಳಿಗ್ಗೆ ಸಮಯದಲ್ಲೇ ಕಸ ಸಂಗ್ರಹಿಸುವುದಿಲ್ಲ, ಇನ್ನು ಸಂಜೆಯಾದ ಮೇಲೆ ಅವರು ಮನೆಮನೆಗೆ ಬರುತ್ತಾರೆಯೇ? ಅಧಿಕಾರಿಗಳು ನಿಯಮ ಮಾಡುವ ಮುನ್ನ ಯೋಚಿಸಬೇಕು’ ಎಂದು ರಾಜರಾಜೇಶ್ವರಿನಗರದ ಉಮಾ ಹೇಳಿದರು.</p>.<p><strong>ಒಣತ್ಯಾಜ್ಯ ಸಂಗ್ರಹಿಸುತ್ತಿಲ್ಲ</strong> </p><p>ಹೊಸಕೆರೆ ಹಳ್ಳಿ ಸಪ್ತಗಿರಿ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಒಣ ತ್ಯಾಜ್ಯ ಸಂಗ್ರಹಿಸುತ್ತಿಲ್ಲ. ದಿನ ಬಿಟ್ಟು ದಿನ ಹಸಿ ಕಸವನ್ನು ಸಂಗ್ರಹಿಸುತ್ತಿದ್ದಾರೆ. ಆದರೆ ಒಣ ತ್ಯಾಜ್ಯ ಸಂಗ್ರಹಿಸಲು ಯಾರೂ ಬರುತ್ತಿಲ್ಲ. ಹೀಗಾಗಿ ರಸ್ತೆಗಳಲ್ಲಿ ಒಣ ತ್ಯಾಜ್ಯ ಸುರಿಯಲಾಗುತ್ತಿದೆ ಎಂದು ನಿವಾಸಿಗಳು ದೂರಿದರು. ವಿಜಯನಗರ ಕ್ಲಬ್ ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಸೋಫಾ ಹಾಸಿಗೆ ಸೇರಿದಂತೆ ಹಲವು ರೀತಿಯ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಹಲವು ತಿಂಗಳಿಂದ ರಾಶಿ ತ್ಯಾಜ್ಯ ಬಿದ್ದಿದ್ದರೂ ನಗರ ಪಾಲಿಕೆಯವರು ಕ್ರಮ ಕೈಗೊಳ್ಳುತ್ತಿಲ್ಲ. ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಸುನಿಲ್ ಹೇಳಿದರು. ಟೆಲಿಕಾಂ ಬಡಾವಣೆಯ ನಾಗರಿಕರ ಸೌಲಭ್ಯದ ನಿವೇಶನಗಳಲ್ಲಿ ಕಸವನ್ನು ಸುರಿದು ಅಲ್ಲೇ ವಿಂಗಡಿಸಲಾಗುತ್ತದೆ. ಅಲ್ಲದೆ ಲಾರಿ ಆಟೊ ಸೇರಿದಂತೆ ಹತ್ತಾರು ವಾಹನಗಳು ನಿಂತಿರುತ್ತವೆ. ಇಲ್ಲಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ ಎಂದು ಚಂದ್ರಶೇಖರ್ ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮನೆಯ ಕಸವನ್ನು ವಿಂಗಡಿಸಿಟ್ಟಿರುತ್ತೇವೆ, ಪಾಲಿಕೆಯವರು ಹೇಳಿದ ನಿಯಮವನ್ನೇ ಪಾಲಿಸಿರುತ್ತೇವೆ. ಆದರೆ ಕಸ ಸಂಗ್ರಹಿಸುವವರು ಬರುವುದಿಲ್ಲ. ಇಂತಹ ಲೋಪಕ್ಕೆ ನಗರ ಪಾಲಿಕೆಗಳು ದಂಡ ವಿಧಿಸುವುದಿಲ್ಲವೇ...’</p>.<p>ನಗರದ ಹಲವು ಬಡಾವಣೆಗಳ ನಾಗರಿಕರ ಪ್ರಶ್ನೆ ಇದು. </p>.<p>‘ಹಸಿ, ಒಣ, ನೈರ್ಮಲ್ಯ ಹಾಗೂ ವಿಶೇಷ ಕಾಳಜಿಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಇಡಿ; ಸರಿಯಾದ ಡಸ್ಟ್ಬಿನ್ ಬಳಸಿರಿ, ಮುಚ್ಚಿ ಇಡಿ; ಅಧಿಕೃತ ಸಂಗ್ರಹಕರಿಗೆ ಮಾತ್ರ ತ್ಯಾಜ್ಯ ಹಸ್ತಾಂತರಿಸಿ; ಸಾಧ್ಯವಾದರೆ ಹಸಿ ತ್ಯಾಜ್ಯವನ್ನು ಮನೆಯಲ್ಲೇ/ ಸಮುದಾಯದಲ್ಲಿ ಕಾಂಪೋಸ್ಟ್ ಮಾಡಿ; ಕಡಿಮೆ ಬಳಕೆ– ಮರು ಬಳಕೆ, ಮರು ಸಂಸ್ಕರಣೆ ಅನುಸರಿಸಿ... ಈ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಐದೂ ನಗರ ಪಾಲಿಕೆಗಳು ಪ್ರಚಾರ ಮಾಡುತ್ತಲೇ ಇವೆ. ಆದರೆ, ಅವರ ನಿಯಮಗಳೆಲ್ಲವನ್ನೂ ಪಾಲಿಸಿದರೂ ಮೂರ್ನಾಲ್ಕು ದಿನ ತ್ಯಾಜ್ಯ ಸಂಗ್ರಹಿಸುವುದೇ ಇಲ್ಲ. ಅವರಿಗೆ ಯಾವ ದಂಡ ವಿಧಿಸುತ್ತಿದ್ದೀರಿ ಹೇಳಿ’ ಎಂದು ಯಶವಂತಪುರ, ರಾಜರಾಜೇಶ್ವರಿನಗರ, ಜಯನಗರ, ಪದ್ಮನಾಭನಗರ, ಬಿಟಿಎಂ ಲೇಔಟ್, ಯಲಹಂಕ, ಬ್ಯಾಟರಾಯನಪುರದ ಹಲವು ನಾಗರಿಕರು ಪ್ರಶ್ನಿಸುತ್ತಾರೆ.</p>.<p>‘ಕಸ ಬಿಸಾಡಿದವರು, ವಿಂಗಡಿಸಿದವರಿಗೆ ದಂಡ ವಿಧಿಸಿ, ಫೋಟೊ ತೆಗೆಸಿಕೊಳ್ಳುವ ಮಾರ್ಷಲ್ಗಳು ಹಾಗೂ ಅಧಿಕಾರಿಗಳು, ಮನೆಮನೆಯಿಂದ ಕಸ ಸಂಗ್ರಹಿಸದವರ ಮೇಲೆ ಏಕೆ ಕ್ರಮ ಕೈಗೊಳ್ಳುವುದಿಲ್ಲ’ ಎಂಬುದು ಹಲವರ ಪ್ರಶ್ನೆಯಾಗಿದೆ. ಬಿಎಸ್ಡಬ್ಲ್ಯುಎಂಎಲ್ ಅಧಿಕಾರಿಗಳು ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.</p>.<p>‘ತ್ಯಾಜ್ಯ ವಿಂಗಡಿಸದಿದ್ದರೆ ಕೊಂಡೊಯ್ಯುವುದಿಲ್ಲ ಎನ್ನುತ್ತಾರೆ. ಎಲ್ಲ ರೀತಿಯ ವಿಂಗಡಣೆ ಮಾಡಿದರೂ, ಹಸಿ ಕಸವನ್ನು ನಿತ್ಯವೂ ಸಂಗ್ರಹಿಸುತ್ತಿಲ್ಲ. ಈ ಬಗ್ಗೆ ಸಹಾಯವಾಣಿಗೆ ದೂರು ನೀಡಿದರೆ, ಅಂದು ಅಥವಾ ಮುಂದಿನ ದಿನ ಸಂಗ್ರಹವಾಗುತ್ತದೆ. ಮತ್ತೆ ಅದೇ ಸ್ಥಿತಿ. ಅಲ್ಲದೆ, ‘ನಮ್ಮ ಮೇಲೆ ದೂರು ನೀಡಿದ್ದೀರಾ’ ಎಂದು ಕಸ ಸಂಗ್ರಹಿಸುವವರು ದಬಾಯಿಸುತ್ತಾರೆ. ಅವರಿಗೆ ಮಾತು ಕೊಡಲು ಸಾಧ್ಯವಿಲ್ಲ’ ಎಂದು ಜಯನಗರದ ನಿವಾಸಿ ವಿದ್ಯಾ ಹೇಳಿದರು.</p>.<p>‘ಮೊದಲು ಕಸದ ಸೆಸ್ ಎಂದು ಆಸ್ತಿ ತೆರಿಗೆಯಲ್ಲೇ ಪಡೆಯುತ್ತಿದ್ದರು. ಕಳೆದ ವರ್ಷದಿಂದ ಕಸದ ಸೇವಾ ತೆರಿಗೆ ಎಂದು ಸಾವಿರಾರು ರೂಪಾಯಿಯನ್ನು ಆಸ್ತಿ ತೆರಿಗೆಗೇ ಸೇರಿಸಿದ್ದಾರೆ. ಅಷ್ಟು ಕೊಟ್ಟರೆ ನಮ್ಮ ಬಡಾವಣೆ ಸ್ವಚ್ಛವಾಗುತ್ತದೆ ಎಂದು ನಂಬಿದ್ದೆವು, ಅದೂ ಇಲ್ಲ. ಹಿಂದಿಗಿಂತ ಕಸದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ, ಕಸ ಸಂಗ್ರಹಿಸುವವರಿಗೆ ಹಣ ಕೊಡದಿದ್ದರೆ ಅವರು ಮನೆ ಬಳಿ ಆಟೊ ನಿಲ್ಲಿಸುವುದೇ ಇಲ್ಲ. ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ. ಅಧಿಕಾರಿಗಳಿಗೆ ಹೇಳಿದರೆ ಅವರೂ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಈ ವ್ಯವಸ್ಥೆಯನ್ನು ಅಧಿಕಾರಿಗಳೇ ಸರಿಪಡಿಸದಿದ್ದರೆ ಹೇಗೆ? ಎಂದು ವಿಜಯನಗರದ ಗೌರಮ್ಮ ಪ್ರಶ್ನಿಸಿದರು.</p>.<p>‘ರಸ್ತೆಗಳಲ್ಲಿ ಕಸ ಎಸೆಯುವುದು ಸಾಮಾನ್ಯವಾಗಿಬಿಟ್ಟಿದೆ. ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗುವಂತೆ ಬೆಳಿಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ಕಸ ಸಂಗ್ರಹಿಸಲಾಗುತ್ತದೆ ಎಂದು ಬಿಎಸ್ಡಬ್ಲ್ಯುಎಂಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ, ಅಂತಹ ವ್ಯವಸ್ಥೆ ಎಲ್ಲೂ ಕಾಣುತ್ತಿಲ್ಲ. ಬೆಳಿಗ್ಗೆ ಸಮಯದಲ್ಲೇ ಕಸ ಸಂಗ್ರಹಿಸುವುದಿಲ್ಲ, ಇನ್ನು ಸಂಜೆಯಾದ ಮೇಲೆ ಅವರು ಮನೆಮನೆಗೆ ಬರುತ್ತಾರೆಯೇ? ಅಧಿಕಾರಿಗಳು ನಿಯಮ ಮಾಡುವ ಮುನ್ನ ಯೋಚಿಸಬೇಕು’ ಎಂದು ರಾಜರಾಜೇಶ್ವರಿನಗರದ ಉಮಾ ಹೇಳಿದರು.</p>.<p><strong>ಒಣತ್ಯಾಜ್ಯ ಸಂಗ್ರಹಿಸುತ್ತಿಲ್ಲ</strong> </p><p>ಹೊಸಕೆರೆ ಹಳ್ಳಿ ಸಪ್ತಗಿರಿ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಒಣ ತ್ಯಾಜ್ಯ ಸಂಗ್ರಹಿಸುತ್ತಿಲ್ಲ. ದಿನ ಬಿಟ್ಟು ದಿನ ಹಸಿ ಕಸವನ್ನು ಸಂಗ್ರಹಿಸುತ್ತಿದ್ದಾರೆ. ಆದರೆ ಒಣ ತ್ಯಾಜ್ಯ ಸಂಗ್ರಹಿಸಲು ಯಾರೂ ಬರುತ್ತಿಲ್ಲ. ಹೀಗಾಗಿ ರಸ್ತೆಗಳಲ್ಲಿ ಒಣ ತ್ಯಾಜ್ಯ ಸುರಿಯಲಾಗುತ್ತಿದೆ ಎಂದು ನಿವಾಸಿಗಳು ದೂರಿದರು. ವಿಜಯನಗರ ಕ್ಲಬ್ ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಸೋಫಾ ಹಾಸಿಗೆ ಸೇರಿದಂತೆ ಹಲವು ರೀತಿಯ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಹಲವು ತಿಂಗಳಿಂದ ರಾಶಿ ತ್ಯಾಜ್ಯ ಬಿದ್ದಿದ್ದರೂ ನಗರ ಪಾಲಿಕೆಯವರು ಕ್ರಮ ಕೈಗೊಳ್ಳುತ್ತಿಲ್ಲ. ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಸುನಿಲ್ ಹೇಳಿದರು. ಟೆಲಿಕಾಂ ಬಡಾವಣೆಯ ನಾಗರಿಕರ ಸೌಲಭ್ಯದ ನಿವೇಶನಗಳಲ್ಲಿ ಕಸವನ್ನು ಸುರಿದು ಅಲ್ಲೇ ವಿಂಗಡಿಸಲಾಗುತ್ತದೆ. ಅಲ್ಲದೆ ಲಾರಿ ಆಟೊ ಸೇರಿದಂತೆ ಹತ್ತಾರು ವಾಹನಗಳು ನಿಂತಿರುತ್ತವೆ. ಇಲ್ಲಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ ಎಂದು ಚಂದ್ರಶೇಖರ್ ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>