ಬೆಂಗಳೂರು: ನಗರದಲ್ಲಿ ಶನಿವಾರ ಆರಂಭವಾದ ‘ಬೆಂಗಳೂರು ಕವನೋತ್ಸವ’ದಲ್ಲಿ ಮೊದಲ ದಿನ ಬಹುಭಾಷಾ ಸೊಗಡು ಮೇಳೈಸಿತು. ಕನ್ನಡ, ಹಿಂದಿ, ತಮಿಳು, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷಾ ಕವಿಗಳು ಸಮಕಾಲೀನ ಸಮಸ್ಯೆ ಹಾಗೂ ಸವಾಲುಗಳನ್ನು ಕವನದ ಮೂಲಕ ಅಭಿವ್ಯಕ್ತಗೊಳಿಸಿದರು.
ವೇದಿಕೆಯಲ್ಲಿ ಕಾವ್ಯದ ರಸಧಾರೆ ಹರಿಯಿತು. ಇಡೀ ಕಾರ್ಯಕ್ರಮಕ್ಕೆ ಸಂಗೀತಾಸಕ್ತರು ತಲೆದೂಗಿದರು.
ಇಲ್ಲಿನ ಲೀಲಾ ಪ್ಯಾಲೆಸ್ನಲ್ಲಿ ‘ಆಟಾ ಗಲಾಟ’ದ 6ನೇ ಆವೃತ್ತಿಯ ಉತ್ಸವಕ್ಕೆ ಸಿನಿಮಾ ನಟಿ, ಲೇಖಕಿ ದೀಪ್ತಿ ನವಲ್ ಚಾಲನೆ ನೀಡಿದರು.
ಕೋವಿಡ್ ಸಾಂಕ್ರಾಮಿಕ ರೋಗ ಭೀತಿಯಿಂದ ಎರಡು ವರ್ಷ ಆನ್ಲೈನ್ನಲ್ಲಿ ಕವನ ಉತ್ಸವ ನಡೆದಿತ್ತು. ಈ ಬಾರಿ ಭೌತಿಕವಾಗಿ ನಡೆದ ಕಾರ್ಯಕ್ರಮಕ್ಕೆ ಹಲವರು ಸಾಕ್ಷಿಯಾದರು.