ವಿವಿಧ ಭಾಷೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಮಕ್ಕಳಿಗೆ ಪ್ರತ್ಯೇಕ ವೇದಿಕೆ ಇರಲಿದೆ. ಬೂಕರ್ ಪ್ರಶಸ್ತಿ ವಿಜೇತರಾದ ಗೀತಾಂಜಲಿ ಶ್ರೀ, ಶೆಹನ್ ಕರುಣಾತಿಲಕ, ಪ್ರವಾಸಿ ಬರಹಗಾರ ಪಿಕೊ ಲೈಯರ್, ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ದಾಮೋದರ್ ಮೌಜೊ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಸಾರಾ ಜೋಸೆಫ್, ನಟರಾದ ಫರ್ಹಾನ್ ಅಖ್ತರ್, ರಮೇಶ್ ಅರವಿಂದ್, ಕಬೀರ್ ಬೇಡಿ, ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಲೇಖಕ ವಿಕ್ರಮ್ ಚಂದ್ರ, ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್, ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಕಲಾವಿದೆ ಮಂಜಮ್ಮ ಜೋಗತಿ ಸೇರಿ ಹಲವರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.