<p><strong>ಬೆಂಗಳೂರು:</strong> ಸ್ನೇಹಿತನ ಮನೆಯಲ್ಲೇ ದರೋಡೆ ಮಾಡಿಸಿದ್ದ ಮೇಸ್ತ್ರಿ ಸೇರಿ ಮೂವರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಗುರುಪ್ರಸಾದ್, ಅರ್ಬಾಜ್ ಹಾಗೂ ಜಿಬ್ರಾನ್ ಬಂಧಿತರು. ಬಂಧಿತರಿಂದ ₹12 ಲಕ್ಷ ನಗದು, ₹24 ಲಕ್ಷ ಮೌಲ್ಯದ ಆಭರಣ, ಒಂದು ದ್ವಿಚಕ್ರ ವಾಹನ, ಒಂದು ಕಾರು ಹಾಗೂ ಎರಡು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಚಿಕ್ಕಜಾಲದ ಹುಣಸಮಾರನಹಳ್ಳಿಯ ಕೃಷ್ಣಾಚಾರಿ ಅವರ ಮನೆಗೆ ಏಪ್ರಿಲ್ 18ರಂದು ರಾತ್ರಿ ನುಗ್ಗಿದ್ದ ಅರ್ಬಾಜ್ ಹಾಗೂ ಜಿಬ್ರಾನ್, ಮನೆಯವರಿಗೆ ಚಾಕು ತೋರಿಸಿ 79 ಗ್ರಾಂ ಚಿನ್ನ, 64 ಗ್ರಾಂ ಬೆಳ್ಳಿ ಹಾಗೂ ₹12 ಲಕ್ಷ ನಗದು ದೋಚಿ ಪರಾರಿ ಆಗಿದ್ದರು. ಕೃಷ್ಣಾಚಾರಿ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಕೃತ್ಯ ನಡೆಸಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ತಂಡವು ವಿವಿಧೆಡೆ ಹುಡುಕಾಟ ನಡೆಸಿ ಮೂವರನ್ನು ಬಂಧಿಸಿದೆ ಎಂದು ಪೊಲೀಸರು ಹೇಳಿದರು.</p>.<p>ಕೃಷ್ಣಾಚಾರಿ ಅವರ ಪುತ್ರ ಸುದರ್ಶನ್ ಹಾಗೂ ಆರೋಪಿ ಗುರುಪ್ರಸಾದ್ ಸ್ನೇಹಿತರು. ತಂದೆ ಹೊಸದಾಗಿ ನಿರ್ಮಿಸುತ್ತಿದ್ದ ಮನೆಯ ಕಾಮಗಾರಿ ಕೆಲಸವನ್ನು ಸುದರ್ಶನ್ ಅವರು ಸ್ನೇಹಿತನೇ ಆದ ಗುರುಪ್ರಸಾದ್ಗೆ ಕೊಡಿಸಿದ್ದರು. ಸ್ನೇಹಿತನ ಮನೆಯೆಂದು ಕಡಿಮೆ ಹಣಕ್ಕೆ ಕೆಲಸ ಮಾಡಿಕೊಡುವುದಾಗಿ ಗುರುಪ್ರಸಾದ್ ಒಪ್ಪಿಕೊಂಡಿದ್ದರು. ಆದರೆ, ಮನೆ ನಿರ್ಮಾಣ ಸ್ಥಳದ ಬಳಿ ಬರುತ್ತಿದ್ದ ಸುದರ್ಶನ್ ಹಾಗೂ ಅವರ ತಂದೆ ಕಾಮಗಾರಿ ಕೆಲಸಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಪೂರ್ತಿ ಹಣ ಕೊಡುವುದಿಲ್ಲ ಎಂದೂ ಹೇಳಿದ್ದರು. ಇದರಿಂದ ಬೇಸತ್ತಿದ್ದ ಗುರುಪ್ರಸಾದ್ ಅವರು ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿ ದರೋಡೆ ಮಾಡಿಸಿದ್ದರು’ ಎಂದು ಮೂಲಗಳು ಹೇಳಿವೆ. </p>.<p><strong>ಕೆಲಸಗಾರರಿಗೆ ತರಬೇತಿ:</strong> ಕೆಲಸ ಮಾಡುತ್ತಿದ್ದ ಅರ್ಬಾಜ್ ಹಾಗೂ ಜಿಬ್ರಾನ್ಗೆ ಕಳ್ಳತನ ಮಾಡುವುದು ಹೇಗೆಂದು ಗುರುಪ್ರಸಾದ್ ತರಬೇತಿ ನೀಡಿದ್ದರು. ಅದರಂತೆ ಏಪ್ರಿಲ್ 18ರಂದು ರಾತ್ರಿ ಕೃಷ್ಣಾಚಾರಿ ಅವರ ಮನೆಗೆ ಇಬ್ಬರು ನುಗ್ಗಿ, ಚಾಕು ತೋರಿಸಿ ಚಿನ್ನಾಭರಣ, ನಗದು ದೋಚಿ ಪರಾರಿ ಆಗಿದ್ದರು ಎಂದು ಪೊಲೀಸರು ತಿಳಿಸಿದರು.</p>.<p>‘ಮನೆಗೆ ನುಗ್ಗಿದ ಬಳಿಕ ಆರೋಪಿಗಳು ಚಾಕು ತೋರಿಸಿ ಕಬೋರ್ಡ್ ಕೀ ಕೇಳಿದ್ದರು. ಕೀ ಪಡೆದು ಚಿನ್ನ, ಬೆಳ್ಳಿ ಹಾಗೂ ಹಣವನ್ನು ಚೀಲದಲ್ಲಿ ತುಂಬಿಕೊಂಡಿದ್ದರು. ಈ ವೇಳೆ ‘ನಮ್ಮ ಜೀವನಕ್ಕೆ ಏನು ಮಾಡುವುದು’ ಎಂಬುದಾಗಿ ಮನೆಯ ಮಾಲೀಕರು ಕಣ್ಣೀರು ಹಾಕಿದರು. ಆಗ ₹50 ಸಾವಿರ ವಾಪಸ್ ನೀಡಿದ್ದ ಆರೋಪಿಗಳು ಅಲ್ಲಿಂದ ಪರಾರಿ ಆಗಿದ್ದರು’ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸ್ನೇಹಿತನ ಮನೆಯಲ್ಲೇ ದರೋಡೆ ಮಾಡಿಸಿದ್ದ ಮೇಸ್ತ್ರಿ ಸೇರಿ ಮೂವರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಗುರುಪ್ರಸಾದ್, ಅರ್ಬಾಜ್ ಹಾಗೂ ಜಿಬ್ರಾನ್ ಬಂಧಿತರು. ಬಂಧಿತರಿಂದ ₹12 ಲಕ್ಷ ನಗದು, ₹24 ಲಕ್ಷ ಮೌಲ್ಯದ ಆಭರಣ, ಒಂದು ದ್ವಿಚಕ್ರ ವಾಹನ, ಒಂದು ಕಾರು ಹಾಗೂ ಎರಡು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಚಿಕ್ಕಜಾಲದ ಹುಣಸಮಾರನಹಳ್ಳಿಯ ಕೃಷ್ಣಾಚಾರಿ ಅವರ ಮನೆಗೆ ಏಪ್ರಿಲ್ 18ರಂದು ರಾತ್ರಿ ನುಗ್ಗಿದ್ದ ಅರ್ಬಾಜ್ ಹಾಗೂ ಜಿಬ್ರಾನ್, ಮನೆಯವರಿಗೆ ಚಾಕು ತೋರಿಸಿ 79 ಗ್ರಾಂ ಚಿನ್ನ, 64 ಗ್ರಾಂ ಬೆಳ್ಳಿ ಹಾಗೂ ₹12 ಲಕ್ಷ ನಗದು ದೋಚಿ ಪರಾರಿ ಆಗಿದ್ದರು. ಕೃಷ್ಣಾಚಾರಿ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಕೃತ್ಯ ನಡೆಸಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ತಂಡವು ವಿವಿಧೆಡೆ ಹುಡುಕಾಟ ನಡೆಸಿ ಮೂವರನ್ನು ಬಂಧಿಸಿದೆ ಎಂದು ಪೊಲೀಸರು ಹೇಳಿದರು.</p>.<p>ಕೃಷ್ಣಾಚಾರಿ ಅವರ ಪುತ್ರ ಸುದರ್ಶನ್ ಹಾಗೂ ಆರೋಪಿ ಗುರುಪ್ರಸಾದ್ ಸ್ನೇಹಿತರು. ತಂದೆ ಹೊಸದಾಗಿ ನಿರ್ಮಿಸುತ್ತಿದ್ದ ಮನೆಯ ಕಾಮಗಾರಿ ಕೆಲಸವನ್ನು ಸುದರ್ಶನ್ ಅವರು ಸ್ನೇಹಿತನೇ ಆದ ಗುರುಪ್ರಸಾದ್ಗೆ ಕೊಡಿಸಿದ್ದರು. ಸ್ನೇಹಿತನ ಮನೆಯೆಂದು ಕಡಿಮೆ ಹಣಕ್ಕೆ ಕೆಲಸ ಮಾಡಿಕೊಡುವುದಾಗಿ ಗುರುಪ್ರಸಾದ್ ಒಪ್ಪಿಕೊಂಡಿದ್ದರು. ಆದರೆ, ಮನೆ ನಿರ್ಮಾಣ ಸ್ಥಳದ ಬಳಿ ಬರುತ್ತಿದ್ದ ಸುದರ್ಶನ್ ಹಾಗೂ ಅವರ ತಂದೆ ಕಾಮಗಾರಿ ಕೆಲಸಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಪೂರ್ತಿ ಹಣ ಕೊಡುವುದಿಲ್ಲ ಎಂದೂ ಹೇಳಿದ್ದರು. ಇದರಿಂದ ಬೇಸತ್ತಿದ್ದ ಗುರುಪ್ರಸಾದ್ ಅವರು ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿ ದರೋಡೆ ಮಾಡಿಸಿದ್ದರು’ ಎಂದು ಮೂಲಗಳು ಹೇಳಿವೆ. </p>.<p><strong>ಕೆಲಸಗಾರರಿಗೆ ತರಬೇತಿ:</strong> ಕೆಲಸ ಮಾಡುತ್ತಿದ್ದ ಅರ್ಬಾಜ್ ಹಾಗೂ ಜಿಬ್ರಾನ್ಗೆ ಕಳ್ಳತನ ಮಾಡುವುದು ಹೇಗೆಂದು ಗುರುಪ್ರಸಾದ್ ತರಬೇತಿ ನೀಡಿದ್ದರು. ಅದರಂತೆ ಏಪ್ರಿಲ್ 18ರಂದು ರಾತ್ರಿ ಕೃಷ್ಣಾಚಾರಿ ಅವರ ಮನೆಗೆ ಇಬ್ಬರು ನುಗ್ಗಿ, ಚಾಕು ತೋರಿಸಿ ಚಿನ್ನಾಭರಣ, ನಗದು ದೋಚಿ ಪರಾರಿ ಆಗಿದ್ದರು ಎಂದು ಪೊಲೀಸರು ತಿಳಿಸಿದರು.</p>.<p>‘ಮನೆಗೆ ನುಗ್ಗಿದ ಬಳಿಕ ಆರೋಪಿಗಳು ಚಾಕು ತೋರಿಸಿ ಕಬೋರ್ಡ್ ಕೀ ಕೇಳಿದ್ದರು. ಕೀ ಪಡೆದು ಚಿನ್ನ, ಬೆಳ್ಳಿ ಹಾಗೂ ಹಣವನ್ನು ಚೀಲದಲ್ಲಿ ತುಂಬಿಕೊಂಡಿದ್ದರು. ಈ ವೇಳೆ ‘ನಮ್ಮ ಜೀವನಕ್ಕೆ ಏನು ಮಾಡುವುದು’ ಎಂಬುದಾಗಿ ಮನೆಯ ಮಾಲೀಕರು ಕಣ್ಣೀರು ಹಾಕಿದರು. ಆಗ ₹50 ಸಾವಿರ ವಾಪಸ್ ನೀಡಿದ್ದ ಆರೋಪಿಗಳು ಅಲ್ಲಿಂದ ಪರಾರಿ ಆಗಿದ್ದರು’ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>