<p><strong>ಬೆಂಗಳೂರು</strong>: ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮಾರ್ಗದಲ್ಲಿ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ (ಆರ್ಡಿಎಸ್ಒ) 12 ದಿನ ಪ್ರಾಯೋಗಿಕ ಸಂಚಾರ ನಡೆಸಿದೆ. ಮೂರು ವಾರಗಳ ಒಳಗೆ ವರದಿ ಸಲ್ಲಿಸಲಿದೆ.</p>.<p>ಆರ್ಡಿಎಸ್ಒ ಪ್ರಾಯೋಗಿಕ ವೇಗ ಮತ್ತು ತುರ್ತು ಬ್ರೇಕಿಂಗ್ ದೂರವನ್ನು ಪರೀಕ್ಷೆ ನಡೆಸಿದೆ. ವರದಿ ಸಲ್ಲಿಕೆಯಾದ ಬಳಿಕ ಇಂಡಿಪೆಂಡೆಂಟ್ ಸೇಫ್ಟಿ ಅಸೆಸ್ಸರ್ (ಐಎಸ್ಎ) ಎಲ್ಲ ದಾಖಲೆ, ಅಂಕಿ ಅಂಶಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಲಿದ್ದಾರೆ. ಅದನ್ನು ರೈಲ್ವೆಯ ಮೆಟ್ರೊ ರೈಲು ಸುರಕ್ಷತಾ ಆಯೋಗಕ್ಕೆ (ಸಿಎಂಎಸ್ಆರ್) ಸಲ್ಲಿಸಲಾಗುತ್ತದೆ. ಸಿಎಂಎಸ್ಆರ್ ಆಯುಕ್ತರು ಬಂದು ಅಂತಿಮ ಪರಿಶೀಲನೆ ನಡೆಸುತ್ತಾರೆ. ಅವರು ಒಪ್ಪಿಗೆ ನೀಡಿದ ಬಳಿಕ ಮೆಟ್ರೊ ಸಂಚಾರಕ್ಕೆ ದಿನ ನಿಗದಿಯಾಗಲಿದೆ.</p>.<p>ವೇಗದ ಪ್ರಯೋಗಗಳು ಹೊಸ ರೈಲು ಸಾರ್ವಜನಿಕ ಸೇವೆಗೆ ಅನುಮೋದನೆ ಪಡೆಯುವ ಮೊದಲು ಅದರ ಗರಿಷ್ಠ ಸುರಕ್ಷಿತ ಕಾರ್ಯಾಚರಣೆಯ ವೇಗವನ್ನು ನಿರ್ಧರಿಸುತ್ತವೆ. ತುರ್ತು ಬ್ರೇಕಿಂಗ್ ದೂರ (ಇಬಿಡಿ) ಪರೀಕ್ಷೆಯು ರೈಲನ್ನು ಸುರಕ್ಷಿತವಾಗಿ ನಿಲ್ಲಿಸುವ ಸಾಮರ್ಥ್ಯವನ್ನು ಅಳೆಯುತ್ತದೆ. ರೈಲಿನ ವಿನ್ಯಾಸ ವೇಗವನ್ನು ಗಂಟೆಗೆ 90 ಕಿ.ಮೀ. ವೇಗದಲ್ಲಿ ನಡೆಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p>ಮೂರು ತಿಂಗಳು ತಡ: ಗುಲಾಬಿ ಮಾರ್ಗದಲ್ಲಿ ಮೆಟ್ರೊ ಸಂಚಾರದ ಗಡುವು ಹಲವು ಬಾರಿ ವಿಸ್ತರಣೆಗೊಂಡಿದ್ದು, ಮೇ ಅಂತ್ಯದಲ್ಲಿ ಆರಂಭವಾಗಲಿದೆ ಎಂದು ಆರು ತಿಂಗಳ ಹಿಂದೆ ಅಧಿಕಾರಿಗಳು, ಜನಪ್ರತಿನಿಧಿಗಳು ತಿಳಿಸಿದ್ದರು. ಇದೀಗ ಒಂದೊಂದೇ ಪರಿಶೀಲನೆ, ಪ್ರಯೋಗ, ಪರೀಕ್ಷೆಗಳು ಆರಂಭವಾಗಿದ್ದು, ಅಧಿಕೃತ ವಾಣಿಜ್ಯ ಸಂಚಾರಕ್ಕೆ ಇನ್ನೂ ಮೂರು ತಿಂಗಳು ಬೇಕು ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮೇ ಅಂತ್ಯದ ವೇಳೆಗೆ ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗಳಿಗಾಗಿ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ಐಎಸ್ಎ) ನಡೆಸಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಈ ಮಾರ್ಗಕ್ಕೆ ಐದು ಪ್ರೊಟೊಟೈಪ್ ರೈಲುಗಳ ಪೂರೈಕೆಯಾಗಿದೆ. ಸದ್ಯದಲ್ಲಿಯೇ ಆರನೇ ರೈಲನ್ನು ಪಿಎಸ್ಯು ಬಿಇಎಂಎಲ್ ಪೂರೈಕೆ ಮಾಡಲಿದೆ ಎಂದು ಹೇಳಿದ್ದಾರೆ.</p>.<p>ಆಗಸ್ಟ್ 15ರ ಒಳಗೆ ಆರಂಭ</p><p>ಆರ್ಡಿಎಸ್ಒ ವರದಿ ಸಲ್ಲಿಕೆಯಾದ ಮೇಲೆ ಆಂತರಿಕ ವೇಗ ಪ್ರಮಾಣ ಪತ್ರ ಸಿಗಲಿದೆ. ಆ ನಂತರ ಉಳಿದ ಕೆಲಸಗಳು ನಡೆಯಲಿವೆ. ಆಗಸ್ಟ್ 15ರ ಒಳಗೆ ಎತ್ತರಿಸಿದ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ. ಡೇರಿ ಸರ್ಕಲ್ನಿಂದ ನಾಗವಾರದವರೆಗೆ ಸುರಂಗ ಮಾರ್ಗದಲ್ಲಿ ಈ ವರ್ಷ ಡಿಸೆಂಬರ್ ಒಳಗೆ ಸಂಚಾರ ಆರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು. </p>. <p>ಎತ್ತರಿಸಿದ ನಿಲ್ದಾಣಗಳು</p><p>ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರ ಹುಳಿಮಾವು ಐಐಎಂಬಿ ಜೆ.ಪಿ. ನಗರ ನಾಲ್ಕನೇ ಹಂತ ಜಯದೇವ ಆಸ್ಪತ್ರೆ ಸ್ವಾಗತ್ ರೋಡ್ ಕ್ರಾಸ್ (ತಾವರೆಕೆರೆ) ನಿಲ್ದಾಣಗಳಿವೆ. ಜಯದೇವ ಆಸ್ಪತ್ರೆ ನಿಲ್ದಾಣವು ಹಳದಿ ಮಾರ್ಗದೊಂದಿಗೆ ಇಂಟರ್ಚೇಂಜ್ ನಿಲ್ದಾಣವಾಗಿರಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮಾರ್ಗದಲ್ಲಿ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ (ಆರ್ಡಿಎಸ್ಒ) 12 ದಿನ ಪ್ರಾಯೋಗಿಕ ಸಂಚಾರ ನಡೆಸಿದೆ. ಮೂರು ವಾರಗಳ ಒಳಗೆ ವರದಿ ಸಲ್ಲಿಸಲಿದೆ.</p>.<p>ಆರ್ಡಿಎಸ್ಒ ಪ್ರಾಯೋಗಿಕ ವೇಗ ಮತ್ತು ತುರ್ತು ಬ್ರೇಕಿಂಗ್ ದೂರವನ್ನು ಪರೀಕ್ಷೆ ನಡೆಸಿದೆ. ವರದಿ ಸಲ್ಲಿಕೆಯಾದ ಬಳಿಕ ಇಂಡಿಪೆಂಡೆಂಟ್ ಸೇಫ್ಟಿ ಅಸೆಸ್ಸರ್ (ಐಎಸ್ಎ) ಎಲ್ಲ ದಾಖಲೆ, ಅಂಕಿ ಅಂಶಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಲಿದ್ದಾರೆ. ಅದನ್ನು ರೈಲ್ವೆಯ ಮೆಟ್ರೊ ರೈಲು ಸುರಕ್ಷತಾ ಆಯೋಗಕ್ಕೆ (ಸಿಎಂಎಸ್ಆರ್) ಸಲ್ಲಿಸಲಾಗುತ್ತದೆ. ಸಿಎಂಎಸ್ಆರ್ ಆಯುಕ್ತರು ಬಂದು ಅಂತಿಮ ಪರಿಶೀಲನೆ ನಡೆಸುತ್ತಾರೆ. ಅವರು ಒಪ್ಪಿಗೆ ನೀಡಿದ ಬಳಿಕ ಮೆಟ್ರೊ ಸಂಚಾರಕ್ಕೆ ದಿನ ನಿಗದಿಯಾಗಲಿದೆ.</p>.<p>ವೇಗದ ಪ್ರಯೋಗಗಳು ಹೊಸ ರೈಲು ಸಾರ್ವಜನಿಕ ಸೇವೆಗೆ ಅನುಮೋದನೆ ಪಡೆಯುವ ಮೊದಲು ಅದರ ಗರಿಷ್ಠ ಸುರಕ್ಷಿತ ಕಾರ್ಯಾಚರಣೆಯ ವೇಗವನ್ನು ನಿರ್ಧರಿಸುತ್ತವೆ. ತುರ್ತು ಬ್ರೇಕಿಂಗ್ ದೂರ (ಇಬಿಡಿ) ಪರೀಕ್ಷೆಯು ರೈಲನ್ನು ಸುರಕ್ಷಿತವಾಗಿ ನಿಲ್ಲಿಸುವ ಸಾಮರ್ಥ್ಯವನ್ನು ಅಳೆಯುತ್ತದೆ. ರೈಲಿನ ವಿನ್ಯಾಸ ವೇಗವನ್ನು ಗಂಟೆಗೆ 90 ಕಿ.ಮೀ. ವೇಗದಲ್ಲಿ ನಡೆಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p>ಮೂರು ತಿಂಗಳು ತಡ: ಗುಲಾಬಿ ಮಾರ್ಗದಲ್ಲಿ ಮೆಟ್ರೊ ಸಂಚಾರದ ಗಡುವು ಹಲವು ಬಾರಿ ವಿಸ್ತರಣೆಗೊಂಡಿದ್ದು, ಮೇ ಅಂತ್ಯದಲ್ಲಿ ಆರಂಭವಾಗಲಿದೆ ಎಂದು ಆರು ತಿಂಗಳ ಹಿಂದೆ ಅಧಿಕಾರಿಗಳು, ಜನಪ್ರತಿನಿಧಿಗಳು ತಿಳಿಸಿದ್ದರು. ಇದೀಗ ಒಂದೊಂದೇ ಪರಿಶೀಲನೆ, ಪ್ರಯೋಗ, ಪರೀಕ್ಷೆಗಳು ಆರಂಭವಾಗಿದ್ದು, ಅಧಿಕೃತ ವಾಣಿಜ್ಯ ಸಂಚಾರಕ್ಕೆ ಇನ್ನೂ ಮೂರು ತಿಂಗಳು ಬೇಕು ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮೇ ಅಂತ್ಯದ ವೇಳೆಗೆ ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗಳಿಗಾಗಿ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ಐಎಸ್ಎ) ನಡೆಸಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಈ ಮಾರ್ಗಕ್ಕೆ ಐದು ಪ್ರೊಟೊಟೈಪ್ ರೈಲುಗಳ ಪೂರೈಕೆಯಾಗಿದೆ. ಸದ್ಯದಲ್ಲಿಯೇ ಆರನೇ ರೈಲನ್ನು ಪಿಎಸ್ಯು ಬಿಇಎಂಎಲ್ ಪೂರೈಕೆ ಮಾಡಲಿದೆ ಎಂದು ಹೇಳಿದ್ದಾರೆ.</p>.<p>ಆಗಸ್ಟ್ 15ರ ಒಳಗೆ ಆರಂಭ</p><p>ಆರ್ಡಿಎಸ್ಒ ವರದಿ ಸಲ್ಲಿಕೆಯಾದ ಮೇಲೆ ಆಂತರಿಕ ವೇಗ ಪ್ರಮಾಣ ಪತ್ರ ಸಿಗಲಿದೆ. ಆ ನಂತರ ಉಳಿದ ಕೆಲಸಗಳು ನಡೆಯಲಿವೆ. ಆಗಸ್ಟ್ 15ರ ಒಳಗೆ ಎತ್ತರಿಸಿದ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ. ಡೇರಿ ಸರ್ಕಲ್ನಿಂದ ನಾಗವಾರದವರೆಗೆ ಸುರಂಗ ಮಾರ್ಗದಲ್ಲಿ ಈ ವರ್ಷ ಡಿಸೆಂಬರ್ ಒಳಗೆ ಸಂಚಾರ ಆರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು. </p>. <p>ಎತ್ತರಿಸಿದ ನಿಲ್ದಾಣಗಳು</p><p>ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರ ಹುಳಿಮಾವು ಐಐಎಂಬಿ ಜೆ.ಪಿ. ನಗರ ನಾಲ್ಕನೇ ಹಂತ ಜಯದೇವ ಆಸ್ಪತ್ರೆ ಸ್ವಾಗತ್ ರೋಡ್ ಕ್ರಾಸ್ (ತಾವರೆಕೆರೆ) ನಿಲ್ದಾಣಗಳಿವೆ. ಜಯದೇವ ಆಸ್ಪತ್ರೆ ನಿಲ್ದಾಣವು ಹಳದಿ ಮಾರ್ಗದೊಂದಿಗೆ ಇಂಟರ್ಚೇಂಜ್ ನಿಲ್ದಾಣವಾಗಿರಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>