ಹಲ್ಲೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಕಾರ್ಮಿಕ ಸಚಿವ ಎಸ್. ಸುರೇಶ್ಕುಮಾರ್, ಕಾರ್ಮಿಕ ಅಧಿಕಾರಿ ಸಿ.ಎನ್. ಯಶೋಧರ ಅವರ ನೇತೃತ್ವದಲ್ಲಿ ತಂಡ ರಚಿಸಿ ಸಂತ್ರಸ್ತ ಸೆಕ್ಯುರಿಟಿ ಗಾರ್ಡ್ಗಳ ಹೇಳಿಕೆ ಪಡೆಯುವಂತೆ ಸೂಚಿಸಿದ್ದರು. ಅಲ್ಲದೆ, ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಇದೀಗ ಸಚಿವರ ನಿರ್ದೇಶನದಂತೆ, ಕಾರ್ಮಿಕ ಕಾಯ್ದೆಯಡಿ ನೋಂದಣಿಯಾಗಿದ್ದ ಕಂಪನಿಯ ಪರವಾನಗಿಯನ್ನು ಇಲಾಖೆ ಗುರುವಾರ ರದ್ದುಪಡಿಸಿದೆ.