‘ಜಮ್ಮು ಮತ್ತು ಕಾಶ್ಮೀರ ಹಾಗೂ ಕರ್ನಾಟಕ ಸೇರಿದಂತೆ ಐದು ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸಿತು. ರಾಜ್ಯದ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ದಾಳಿ ನಡೆಸಲಾಯಿತು. ಶಂಕಿತರಾದ ಬೆಂಗಳೂರಿನಶಂಕರ್ ವೆಂಕಟೇಶ್ ಪೆರುಮಾಳ್, ಮಂಗಳೂರಿನ ಉಮ್ಮರ್ ಅಬ್ದುಲ್ ರೆಹಮಾನ್, ಶ್ರೀನಗರದ ಒಬೇದ್ ಹಮೀದ್ ಹಾಗೂ ಕಾಶ್ಮೀರದ ಮುಜಾಮಿಲ್ ಹಸ್ಸನ್ ಭಟ್ ಎಂಬ ನಾಲ್ವರನ್ನು ಬಂಧಿಸಲಾಗಿದೆ’ ಎಂದು ಎನ್ಐಎ ಮೂಲಗಳು ತಿಳಿಸಿವೆ.