‘ಜಾನುವಾರುಗಳ ಜೀವ ರಕ್ಷಣೆಗೆ ಹೆಚ್ಚುವರಿ ಸೇವೆ ನೀಡಬೇಕೆಂಬ ಹಂಬಲದಿಂದ 800ಕ್ಕೂ ಹೆಚ್ಚು ಮಂದಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸಕ ಯಾವುದೋ ಒಂದು ಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಅಗತ್ಯ ಬಿದ್ದಾಗ ಇಡೀ ತಾಲ್ಲೂಕಿನಲ್ಲೇ ಓಡಾಡಿ ಸೇವೆ ಒದಗಿಸುತ್ತಾರೆ’ ಎಂದು ಪಶುವೈದ್ಯರ ಸಂಘದ ನಿಕಟಪೂರ್ವ ಅಧ್ಯಕ್ಷ ಶಿವಶರಣಪ್ಪ ಯಲಗೋಡ, ಸ್ನಾತಕೋತ್ತರ ಪದವೀಧರರ ಸಂಘದಅಧ್ಯಕ್ಷ ಟಿ.ಎಸ್. ಶ್ರೀಧರಮೂರ್ತಿ ಹೇಳಿದ್ದಾರೆ.