<p><strong>ಬನ್ನೇರುಘಟ್ಟ(ಆನೇಕಲ್):</strong> ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇಂಡಿಯಾ ಪೋಸ್ಟ್, ಪೋಸ್ಟ್ ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ ಮತ್ತು ಪೋಸ್ಟ್ ಕಾರ್ಡ್ ವಿಲ್ಲೆ ಸಹಯೋಗದಲ್ಲಿ ವಿಶ್ವ ಆಮೆ ದಿನಾಚರಣೆ ಶನಿವಾರ ನಡೆಯಿತು.</p>.<p>ನೆಲದ ಆಮೆ, ಕಡಲಾಮೆ ಮತ್ತು ಸಿಹಿ ನೀರಿನ ಆಮೆಗಳನ್ನು ಒಳಗೊಂಡ ಒಂಭತ್ತು ಅಂಚೆ ಲಕೋಟೆಯನ್ನು ಬನ್ನೇರುಘಟ್ಟ ಉದ್ಯಾನದಲ್ಲಿ ಬಿಡುಗಡೆ ಮಾಡಲಾಯಿತು. ಆಮೆಗಳ ಜಾತಿಗಳ ನಡುವಿನ ವ್ಯತ್ಯಾಸ ಬಗ್ಗೆ ಮಾಹಿತಿ ನಿಡಲಾಯಿತು.</p>.<p>ಆಮೆ ಸಂರಕ್ಷಣೆ ಪ್ರಯತ್ನಗಳಿಗೆ ಕೊಡುಗೆ ನೀಡಬಹುದಾದ ಮಾರ್ಗದ ಬಗ್ಗೆ ಪ್ರೇಕ್ಷಕರಿಗೆ ಕಿರು ಸಂರಕ್ಷಣಾ ಚಲನಚಿತ್ರ ಪ್ರದರ್ಶಿಸಲಾಯಿತು. ಕಡಲಾಮೆಗಳ ಮಾದರಿಗಳನ್ನು ಉದ್ಯಾನದಲ್ಲಿ ಪ್ರದರ್ಶಿಸಿದ್ದು ಪ್ರೇಕ್ಷಕರ ಗಮನ ಸೆಳೆಯಿತು. ಪ್ರವಾಸಿಗರಿಗೆ ಆಮೆ ಪ್ರಬೇಧಗಳು, ಪರಿಸರ ವ್ಯವಸ್ಥೆಯಲ್ಲಿಅವುಗಳ ಪ್ರಮುಖ ಪಾತ್ರಗಳ ಬಗ್ಗೆ ಮಾಹಿತಿ ನೀಡಲಾಯಿತು.</p>.<p>ಬೆಂಗಳೂರು ಅಂಚೆ ಇಲಾಖೆಯ ದಿನೇಶ್ ನಾರಾಯಣ್, ನಳಿನಿ, ಬನ್ನೇರುಘಟ್ಟ ಜೈವಿಕ ಉದ್ಯಾನದ ಉಪ ನಿರ್ದೇಶಕಿ ಅನುಷಾ, ಡಾ.ಪ್ರಯಾಗ್, ವಲಯ ಅರಣ್ಯ ಅಧಿಕಾರಿ ಆನಂದ್ ಮದನೆ, ಉಪ ವಲಯ ಅರಣ್ಯ ಅಧಿಕಾರಿ ಅರ್ಪಿತಾ, ಮಹೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬನ್ನೇರುಘಟ್ಟ(ಆನೇಕಲ್):</strong> ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇಂಡಿಯಾ ಪೋಸ್ಟ್, ಪೋಸ್ಟ್ ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ ಮತ್ತು ಪೋಸ್ಟ್ ಕಾರ್ಡ್ ವಿಲ್ಲೆ ಸಹಯೋಗದಲ್ಲಿ ವಿಶ್ವ ಆಮೆ ದಿನಾಚರಣೆ ಶನಿವಾರ ನಡೆಯಿತು.</p>.<p>ನೆಲದ ಆಮೆ, ಕಡಲಾಮೆ ಮತ್ತು ಸಿಹಿ ನೀರಿನ ಆಮೆಗಳನ್ನು ಒಳಗೊಂಡ ಒಂಭತ್ತು ಅಂಚೆ ಲಕೋಟೆಯನ್ನು ಬನ್ನೇರುಘಟ್ಟ ಉದ್ಯಾನದಲ್ಲಿ ಬಿಡುಗಡೆ ಮಾಡಲಾಯಿತು. ಆಮೆಗಳ ಜಾತಿಗಳ ನಡುವಿನ ವ್ಯತ್ಯಾಸ ಬಗ್ಗೆ ಮಾಹಿತಿ ನಿಡಲಾಯಿತು.</p>.<p>ಆಮೆ ಸಂರಕ್ಷಣೆ ಪ್ರಯತ್ನಗಳಿಗೆ ಕೊಡುಗೆ ನೀಡಬಹುದಾದ ಮಾರ್ಗದ ಬಗ್ಗೆ ಪ್ರೇಕ್ಷಕರಿಗೆ ಕಿರು ಸಂರಕ್ಷಣಾ ಚಲನಚಿತ್ರ ಪ್ರದರ್ಶಿಸಲಾಯಿತು. ಕಡಲಾಮೆಗಳ ಮಾದರಿಗಳನ್ನು ಉದ್ಯಾನದಲ್ಲಿ ಪ್ರದರ್ಶಿಸಿದ್ದು ಪ್ರೇಕ್ಷಕರ ಗಮನ ಸೆಳೆಯಿತು. ಪ್ರವಾಸಿಗರಿಗೆ ಆಮೆ ಪ್ರಬೇಧಗಳು, ಪರಿಸರ ವ್ಯವಸ್ಥೆಯಲ್ಲಿಅವುಗಳ ಪ್ರಮುಖ ಪಾತ್ರಗಳ ಬಗ್ಗೆ ಮಾಹಿತಿ ನೀಡಲಾಯಿತು.</p>.<p>ಬೆಂಗಳೂರು ಅಂಚೆ ಇಲಾಖೆಯ ದಿನೇಶ್ ನಾರಾಯಣ್, ನಳಿನಿ, ಬನ್ನೇರುಘಟ್ಟ ಜೈವಿಕ ಉದ್ಯಾನದ ಉಪ ನಿರ್ದೇಶಕಿ ಅನುಷಾ, ಡಾ.ಪ್ರಯಾಗ್, ವಲಯ ಅರಣ್ಯ ಅಧಿಕಾರಿ ಆನಂದ್ ಮದನೆ, ಉಪ ವಲಯ ಅರಣ್ಯ ಅಧಿಕಾರಿ ಅರ್ಪಿತಾ, ಮಹೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>