ಸರ್ಕಾರ ವಿವಿಧ ನಿಗಮಗಳ ಮೂಲಕ ನೀಡಿರುವ ಕಿರುಸಾಲಗಳನ್ನು ಮನ್ನಾ ಮಾಡಬೇಕು, ಇದೇ 14ರವರೆಗೆ ಹಿರಿಯ ನಾಗರಿಕರಿಗೆ ಮಧುಮೇಹ, ರಕ್ತದೊತ್ತಡ ಪರೀಕ್ಷೆಗಳನ್ನು ಲಭ್ಯ ಇರುವ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಮಾಡಿಸಬೇಕು, ಬೇರೆ ಜಿಲ್ಲೆಗಳಲ್ಲಿನ ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಗೆ ಹೋಗುವ ರೈತರಿಗೆ ವ್ಯವಸ್ಥೆ ಮಾಡಿಕೊಡಬೇಕು, ಶಾಲಾ ಶುಲ್ಕ ಪಾವತಿಗೆ ಸದ್ಯ ವಿನಾಯಿತಿ ನೀಡಬೇಕು ಸಹಿತ ಹಲವಾರು ಬೇಡಿಕೆಗಳನ್ನು ಬಸವರಾಜ ಹೊರಟ್ಟಿ ಅವರು ಸರ್ಕಾರದ ಮುಂದಿಟ್ಟಿದ್ದಾರೆ.