ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ ಡಂಪಿಂಗ್ ಯಾರ್ಡ್ ಆಗಿ ಬದಲಾಗಿದೆ ಎಂದು ಕೆಂಗೇರಿ ವಾರ್ಡ್ ನಾಗರಿಕರು ದೂರಿದರೆ, ರಾಜರಾಜೇಶ್ವರಿನಗರ ವಾರ್ಡ್ ವ್ಯಾಪ್ತಿಯ ಬಂಗಾರಪ್ಪ ಬಡಾವಣೆಯಲ್ಲಿ ಕಸ ಸಂಗ್ರಹಕ್ಕೆ ಆಟೊ ಬರಲು ಸಾಧ್ಯವಾಗದ ಸ್ಥಿತಿಯಿದೆ. ಬದಲಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು. ಪೀಣ್ಯ ಕೈಗಾರಿಕಾ ಪ್ರದೇಶ ತ್ಯಾಜ್ಯಗಳ ಆಗರವಾಗಿ ಪರಿಣಮಿಸಿದೆ. ತ್ಯಾಜ್ಯ ವಿಲೇವಾರಿಗಾಗಿಯೇ ಮೀಸಲಾಗಿದ್ದ ಜಮೀನು ಬಿಬಿಎಂಪಿ ಪಾಲಾಗಿದೆ. ಇದ್ದ ಕೆರೆಯೂ ಕೂಡಾ ಕೈಗಾರಿಕಾ ತ್ಯಾಜ್ಯದ ಹೊಂಡವಾಗಿ ಬದಲಾಗಿದೆ ಎಂದು ಅಲ್ಲಿನ ನಾಗರಿಕರು ಅವಲತ್ತುಕೊಂಡರು.