ಹೈಕೋರ್ಟ್ ಸೂಚನೆ ಮೇರೆಗೆ, ನಗರವನ್ನು ಹೊರಾಂಗಣ ಜಾಹೀರಾತು, ಫ್ಲೆಕ್ಸ್ ಮತ್ತು ಬ್ಯಾನರ್ಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲೂ ಮಂಜುನಾಥ ಪ್ರಸಾದ್ ಪ್ರಮುಖ ಪಾತ್ರ ವಹಿಸಿದ್ದರು. ಪಾಲಿಕೆಯು ಬಜೆಟ್ ಮಂಡನೆ ವೇಳೆ ಆರ್ಥಿಕ ಶಿಸ್ತು ಕಾಪಾಡದಿದ್ದಾಗ, ಉತ್ಪೇಕ್ಷಿತ ಬಜೆಟ್ಗೆ ಅನುಮೋದನೆ ನೀಡಬಾರದು ಎಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದರು. ಅವರಿಗೆ ಸರ್ಕಾರ ಸದ್ಯಕ್ಕೆ ಯಾವುದೇ ಹುದ್ದೆ ತೋರಿಸಿಲ್ಲ.