ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಯಶವಂತಪುರ ತಾಜ್ ವಿವಾಂತಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಜ್ಞರು ವಿವಿಧ ಗೋಷ್ಠಿಗಳನ್ನು ನಡೆಸಿಕೊಡುತ್ತಾರೆ. ವೀರೇಂದ್ರ ಹೆಗ್ಗಡೆ ಅವರಿಗೆ ‘ಜೀವಮಾನ ಸಾಧನೆ’, ದರ್ಶನ್ ಶಂಕರ್ ಅವರಿಗೆ ‘ಟ್ರಾನ್ಸ್ಫಾರ್ಮೇಶನಲ್ ಲೀಡರ್ಶಿಪ್’, ಸಿ.ಎನ್.ಮಂಜುನಾಥ್ ಅವರಿಗೆ ‘ಅತ್ಯುತ್ತಮ ಆಡಳಿತಾಧಿಕಾರಿ’, ಶತಾವಧಾನಿ ಆರ್. ಗಣೇಶ ಅವರಿಗೆ ‘ಸಾಂಪ್ರದಾಯಿಕ ಜ್ಞಾನದ ರಕ್ಷಣೆ ಸಂರಕ್ಷಣೆ’ ಪ್ರಶಸ್ತಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇಶದ 17 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು.