ಸುದ್ದಿಗೋಷ್ಠಿಯಲ್ಲಿ ಮಂಗಳವಾರ ‘ದೊಡ್ಡಿಹಾಳ್ ಸಮಿತಿ ವರದಿ ಪ್ರಕಾರ ವೈಟ್ಟಾಪಿಂಗ್ ಕಾಮಗಾರಿಗಳಲ್ಲಿ ಪ್ರಮುಖ ಲೋಪ ಕಂಡುಬಂದಿಲ್ಲ. ಈ ಕಾಮಗಾರಿಗಳಿಗೆ ಸಮಿತಿ ಕ್ಲೀನ್ ಚಿಟ್ ನೀಡಿದ್ದನ್ನು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ಮುಖ್ಯಮಂತ್ರಿಯವರೂ ನಮ್ಮ ಪಕ್ಷದವರೇ. ಅವರೇ ರಚನೆ ಮಾಡಿರುವ ಸಮಿತಿ ಅದು. ಆ ಸಮಿತಿಯು ಎಲ್ಲ ಸರಿ ಇದೆ ಎಂದು ವರದಿ ನೀಡಿದ ಮೇಲೆ ಎಲ್ಲವೂ ಸರಿಯಾಗಿಯೇ ಇರುತ್ತದೆ’ ಎಂದಿದ್ದರು.