‘ಪ್ರಜಾವಾಣಿ’ಯಲ್ಲಿ ಗುರುವಾರ ಪ್ರಕಟವಾದ ‘ಮಳೆ ಬಂದರೆ ಮಹದೇವನೇ ಗತಿ’ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿಯು, ‘ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕುಂದಲಹಳ್ಳಿ ರಸ್ತೆ ಜಂಕ್ಷನ್, ಸುರಂಜನದಾಸ್ ರಸ್ತೆ ಜಂಕ್ಷನ್ ಹಾಗೂ ವಿಂಡ್ಟನಲ್ ರಸ್ತೆ ಜಂಕ್ಷನ್ನಲ್ಲಿ ಮೂರು ಕೆಳಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಸೇತುವೆಗಳನ್ನು ಒಳಗೊಂಡ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣಕ್ಕೆ ಆರ್.ಎನ್.ಎಸ್.ಐ.ಎಲ್. ಸಂಸ್ಥೆಗೆ ಟೆಂಡರ್ ನೀಡಲಾಗಿದೆ’ ಎಂದು ಹೇಳಿದೆ.