ಈ ಮಧ್ಯೆ, ಬಿಜೆಪಿಯಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ಗೊಂದಲ ಕೊನೇ ಕ್ಷಣದವರೆಗೂ ಮುಂದುವರಿದಿತ್ತು. ಕೊನೆಗೆ,ಜೋಗುವಾಳ್ಯ ವಾರ್ಡ್ನ ಪಾಲಿಕೆ ಸದಸ್ಯ ಎಂ.ಗೌತಮ್ ಕುಮಾರ್ ಅವರನ್ನುಮೇಯರ್ ಸ್ಥಾನಕ್ಕೆ ಮತ್ತುಹೊಸಹಳ್ಳಿ ವಾರ್ಡ್ ಸದಸ್ಯೆ ಮಹಾಲಕ್ಷ್ಮೀ ರವೀಂದ್ರ ಅವರನ್ನುಉಪ ಮೇಯರ್ ಅಭ್ಯರ್ಥಿಯನ್ನಾಗಿ ಮಂಗಳವಾರ ಬೆಳಿಗ್ಗೆ ಆಯ್ಕೆ ಮಾಡಲಾಗಿದೆ.