ಮಳೆಯಿಂದ ತೀವ್ರಹಾನಿಯಾಗಿರುವ ಮಹದೇವಪುರ ವಿಧಾನಸಭೆ ಕ್ಷೇತ್ರಕ್ಕೆ ₹160 ಕೋಟಿ ಮಂಜೂರಾಗಿದೆ. ಕೆ.ಆರ್. ಪುರ– ₹40 ಕೋಟಿ, ಬೊಮ್ಮನಹಳ್ಳಿ– ₹65 ಕೋಟಿ, ಬೆಂಗಳೂರು ದಕ್ಷಿಣ– ₹27.25 ಕೋಟಿ ಹಾಗೂ ಯಲಹಂಕ ಮತ್ತು ಬ್ಯಾಟರಾಯನಪುರ ತಲಾ ₹10 ಕೋಟಿ ನೀಡಲಾಗಿದೆ. ಉಳಿದ ₹33 ಕೋಟಿಯಲ್ಲಿ ನಗರದ 148 ಕೆರೆಗಳಿಗೆ ತೂಬು ಗೇಟ್ಗಳನ್ನು ಅಳವಡಿಸಲು ವಿನಿಯೋಗಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.