‘ಹಾಸಿಗೆ ಕಾಯ್ದಿರಿಸುವ ಕುರಿತು ತನಿಖೆ ನಡೆಸುವ ಹೊಣೆಯನ್ನು ಸರ್ಕಾರ ಪೊಲೀಸರಿಗೆ ವಹಿಸಿದೆ. ಅವರೇ ತನಿಖೆ ನಡೆಸಲಿದ್ದಾರೆ. ಹಾಸಿಗೆ ಕಾಯ್ದಿರಿಸಿದ್ದು ಯಾರು, ಆ ಸಂದರ್ಭದಲ್ಲಿ ತಂತ್ರಾಂಶದ ಲಾಗಿನ್ ಐಡಿ ಯಾರ ನಿಯಂತ್ರಣದಲ್ಲಿತ್ತು, ಲಾಗಿನ್ ಆಗಿದ್ದವರು ಯಾರು, ರೋಗಿಗಳ ಕಡೆಯವರು ಯಾರಿಗೆ ದುಟ್ಟು ಕೊಟ್ಟಿದ್ದಾರೆ, ತೆಗೊಂಡಿದ್ದು ಯಾರು ಎಂಬ ಆಯಾಮದಲ್ಲೂ ತನಿಖೆ ಆಗಬೇಕಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.