ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ನಮಿಕಟ್ಟೆ, ಫಳ್ನೀರ್‌ ರಸ್ತೆಯ ಇಕ್ಕೆಲ ಸ್ವಚ್ಛ

ರಾಮಕೃಷ್ಣ ಮಿಷನ್‌ನ ಸ್ವಚ್ಛತಾ ಅಭಿಯಾನ
Last Updated 17 ಏಪ್ರಿಲ್ 2018, 9:58 IST
ಅಕ್ಷರ ಗಾತ್ರ

ಮಂಗಳೂರು: ಹೈಲ್ಯಾಂಡ್‌ ಮತ್ತು ಫಳ್ನೀರ್‌ ಪರಿಸರದಲ್ಲಿ ಭಾನುವಾರ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ನಾಲ್ಕನೇ ಹಂತದ 25ನೇ ಶ್ರಮದಾನ ನಡೆಯಿತು.

ಮೈಸೂರು ಶ್ರೀರಾಮಕೃಷ್ಣ ಅಶ್ರಮದ ಸ್ವಾಮಿ ತೀರ್ಥಕರಾನಂದಜಿ ಹಾಗೂ ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಶ್ರಮದಾನ ಕಾರ್ಯಕ್ಕೆ ಹಸಿರು ನಿಶಾನೆ ತೋರಿದರು. ಮನೋವೈದ್ಯ ಡಾ. ಸತೀಶ್ ರಾವ್, ಸ್ವಯಂಸೇವಕರಾದ ಮಹ್ಮದ್ ಶಮೀಮ್,  ಲತಾ ಶಿವಕುಮಾರ್ ಉಪಸ್ಥಿತರಿದ್ದರು.

ಶ್ರಮದಾನಕ್ಕೆ ಚಾಲನೆ ನೀಡಿದ ಬಳಿಕ ಸ್ವಾಮೀಜಿದ್ವಯರು ಶ್ರಮದಾನ ಮಾಡಿದರು. ಜೊತೆಗೆ ಶಾಸಕ ಕ್ಯಾಪ್ಟನ್‌ ಗಣೇಶ್ ಕಾರ್ಣಿಕ್ ಹಾಗೂ ಹಿರಿಯ ಕಾರ್ಯಕರ್ತರು ಸುರಿಯುತ್ತಿದ್ದ ಮಳೆ ಯನ್ನೂ ಲೆಕ್ಕಿಸದೇ ಮದರ್ ತೆರೇಸಾ ರಸ್ತೆಯ ಎರಡೂ ಬದಿಗಳನ್ನು ಹಾಗೂ ಫುಟ್‍ಪಾಥ್‍ಗಳನ್ನು ಶುಚಿಗೊಳಿಸಿದರು.

ಮತ್ತೊಂದು ಗುಂಪು ದಯಾನಂದ ಕಂಕನಾಡಿ ಜೊತೆಗೂಡಿ ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿದ್ದ ರಾಶಿ ರಾಶಿ ಕಲ್ಲುಗಳನ್ನು, ಕಟ್ಟಡ ತ್ಯಾಜ್ಯವನ್ನು ತೆಗೆದು ಟಿಪ್ಪರಿಗೆ ತುಂಬಿಸಿದರು. ಇದಲ್ಲದೇ ಬಸ್ ತಂಗುದಾಣವೊಂದು ಕಸ ಹಾಗೂ ಮಣ್ಣು ತುಂಬಿಕೊಂಡು ಪ್ರಯಾಣಿಕರು ಅಲ್ಲಿ ಕುಳಿತುಕೊಳ್ಳಲು ಅಸಾಧ್ಯವಾಗಿತ್ತು. ಈ ದಿನ ದಿನೇಶ್ ಕರ್ಕೇರಾ ಹಾಗೂ ಇತರ ಕಾರ್ಯಕರ್ತರು ಅಲ್ಲಿದ್ದ ಮಣ್ಣು ತೆಗೆದು, ಸ್ವಚ್ಛಗೊಳಿಸಿ, ಬಣ್ಣ ಬಳಿದು, ಸಣ್ಣ ಪುಟ್ಟ ದುರಸ್ತಿಗೊಳಿಸಿ ಬಸ್ ತಂಗುದಾಣವನ್ನು ಸ್ವಚ್ಛ ಸುಂದರವನ್ನಾಗಿಸಲಾಯಿತು.

ಅಲ್ಲಲ್ಲಿ ಕಟ್ಟಿದ್ದ ಪೋಸ್ಟರ್‌ ಬ್ಯಾನರ್ ಗಳನ್ನು ಸೌರಜ್ ಮಂಗಳೂರುತಂಡದ ನೇತೃತ್ವದಲ್ಲಿ  ತೆರವುಗೊಳಿಸಲಾಯಿತು. ದಿಲ್‌ರಾಜ್ ಆಳ್ವ ಅಭಿಯಾನವನ್ನು ಸಂಯೋಜಿಸಿದರು. 26ನೇ ಶ್ರಮದಾನ ಕಾರ್ಯಕ್ರಮ ಮಾರ್ನಮಿಕಟ್ಟೆಯಲ್ಲಿ ಹಮ್ಮಿಕೊಳ್ಳಲಾಯಿತು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಉಪಸ್ಥಿತಿಯಲ್ಲಿ ಪುರುಷೋತ್ತಮ ಚಿತ್ಪಾಲ್, ಪ್ರಾಧ್ಯಪಕರು, ನಿಟ್ಟೆ ಫಿಸಿ ಯೋಥೆರಫಿ ಕಾಲೇಜು ಹಾಗೂ ಸಾಮಾಜಿಕ ಕಾರ್ಯಕರ್ತ ಸುರೇಶ ಶೆಟ್ಟಿ ಶ್ರಮದಾನ ಕಾರ್ಯಕ್ರ ಮವನ್ನು ಶುಭಾರಂಭ ಗೊಳಿಸಿದರು.

ಶುಚಿತ್ವ: ನಿಟ್ಟೆ ಫಿಸಿಯೋ ಥೆರಪಿ ಕಾಲೇ ಜಿನ ಯುವಕ ಯುವತಿಯರು ಮಾರ್ನಮಿ ಕಟ್ಟೆಯ ನಾಲ್ಕೂ ರಸ್ತೆಗಳಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಿಕೊಂಡು ಸ್ವಚ್ಛತೆ ಮಾಡಿದರು.

ಮಂಗಳಾದೇವಿ ದೇವಸ್ಥಾನದತ್ತ ಸಾಗುವ ಮಾರ್ಗ, ನಂದಿಗುಡ್ಡೆಯತ್ತ ಹೋಗುವ ದಾರಿ, ಮೋರ್ಗನ್ಸಗೇಟ್ ರಸ್ತೆ ಹಾಗೂ ಮಾರ್ನಮಿಕಟ್ಟೆ ವೃತ್ತ ಮುಂತಾದ ಸ್ಥಳಗಳನ್ನು ಕಸಗುಡಿಸಿ ಸ್ವಚ್ಚಗೊಳಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಧನೇಶ ಕುಮಾರ ವಿದ್ಯಾರ್ಥಿಗಳನ್ನು ಮಾರ್ಗದರ್ಶನ ನೀಡಿದರು. ನಿವೇದಿತಾ ಬಳಗದ ಸದಸ್ಯರು ಮಾರ್ನಮಿಕಟ್ಟೆಯ ಕೆಳರಸ್ತೆಗಳನ್ನು ಹಾಗೂ ತೋಡುಗಳನ್ನು ಸ್ವಚ್ಛ ಮಾಡಿದರು.

ಡಾ. ಚಂದ್ರಶೇಖರ್, ಉದ್ಯಮಿ ಸಂದೀಪ್ ಶೇಣವ, ನಜೀರ್ ಅಹ್ಮದ್, ಚೇತನಾ ಗಡಿಯಾರ್, ಯೋಗೀಶ್ ಕಾಯರ್ತಡ್ಕ, ಸೇರಿದಂತೆ ಅನೇಕ ಕಾರ್ಯಕರ್ತರು ಈ ಅಭಿಯಾನಗಳಲ್ಲಿ ಪಾಲ್ಗೊಂಡರು. ಶ್ರಮದಾನದ ಬಳಿಕ ಎಲ್ಲ ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಸ್ವಚ್ಛತಾ ಅಭಿಯಾನಗಳಿಗೆ ಎಂಆರ್‌ ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿದೆ.

ಕಸದ ರಾಶಿ ತೆರವು

ಮಾರ್ನಮಿಕಟ್ಟೆಯ ಬಸ್ ತಂಗುದಾಣದ ಪಕ್ಕದ ಜಾಗವೊಂದರಲ್ಲಿ ಸಾರ್ವಜನಿಕರು ಪ್ರತಿನಿತ್ಯ ಕಸತ್ಯಾಜ್ಯವನ್ನು ಬಿಸಾಡುತ್ತಿದ್ದರು. ಕಳೆದೆರಡು ದಿನಗಳಿಂದ ಅಲ್ಲಿನ ಅಂಗಡಿಗಳನ್ನು, ಮನೆಗಳನ್ನು ಸಂಪರ್ಕಿಸಿ ಕಸವನ್ನು ರಸ್ತೆಯ ಬದಿ ಚೆಲ್ಲಬಾರದಾಗಿ ವಿನಂತಿಸಲಾಗಿತ್ತು. ಭಾನುವಾರ ಮೆಹಬೂಬ್ ಖಾನ್, ಸುಧೀರ್ ವಾಮಂಜೂರು ಹಾಗೂ ಸ್ವಯಂಸೇವಕರು ಶ್ರಮವಹಿಸಿ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಿದರು. ನಂತರ ಜೆಸಿಬಿ ಬಳಸಿ ನೆಲವನ್ನು ಸಮತಟ್ಟು ಮಾಡಿ, ಹೊಸದಾಗಿ ಒಂದಿಷ್ಟು ಮಣ್ಣು ಹಾಕಿಸಿದರು ಕೊನೆಯಲ್ಲಿ ಆ ಜಾಗೆಯ ಸೌಂದರ್ಯ ಹೆಚ್ಚಿಸಲು ಹೂಕುಂಡಗಳನ್ನು ಅಲ್ಲಿಡಲಾಯಿತು. ಸುತ್ತಮುತ್ತಲಿನ ಅಂಗಡಿಗಳನ್ನು ಸಂಪರ್ಕಿಸಿ ಈ ಜಾಗೆಯನ್ನು ಸ್ವಚ್ಛವಾಗಿಡುವಂತೆ ಮನವಿ ಮಾಡಿ ಅದರ ನಿರ್ವಹಣೆಯ eವಾಬ್ದಾರಿಯನ್ನು ಅವರಿಗೆ ಕೊಡಲಾಯಿತು. ಉಮಾನಾಥ್ ಕೋಟೆಕಾರ್ ಅಭಿಯಾನದ ಉಸ್ತುವಾರಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT