ಇದರಂತೆ ಟೆಂಡರ್ ಕರೆಯಲು ಅನುಮೋದಿಸಿ ಮೂವರು ಸಹಾಯಕ ಎಂಜಿನಿಯರ್ಗಳಾದ ದೀಪಕ್ ಬಿ., ನರೇಂದ್ರ ಜಿ., ಬಾಲರಾಜು ಎಸ್., ಇಬ್ಬರು ಸಹಾಯಕ ಕಾರ್ಯಪಾಲಕರಾದ ವಸಂತ ಪಿ.ಆರ್., ಪ್ರವೀಣ ವಿ.ಆರ್. ಸೇರಿದಂತೆ ಕಾರ್ಯಪಾಲಕ ಎಂಜಿನಿಯರ್ ಬಿ.ಎಸ್. ದೀಪಕ್ ಸಹಿ ಹಾಕಿದ್ದಾರೆ. ನಂತರ ಇದಕ್ಕೆ ಎಂಜಿನಿಯರ್ ಸದಸ್ಯ ಶಾಂತರಾಜು ಅವರು ‘ಟೆಂಡರ್ ಆಹ್ವಾನಿಸಲು ಅನುಮೋದನೆಗೆ ಮಂಡಿಸಿದೆ’ ಎಂದು ಫೆ.21ರಂದು ಬರೆದು ಆಯುಕ್ತರ ಮುಂದೆ ಕಡತ ಮಂಡಿಸಲಾಗಿದೆ. ಆಯುಕ್ತರು ಅಂದೇ ಟೆಂಡರ್ ಕರೆಯಲು ಅನುಮತಿ ನೀಡಿದ್ದಾರೆ.