ಕೆಂಗೇರಿ ಹೋಬಳಿಯ ಹೆಮ್ಮಿಗೆಪುರ ಗ್ರಾಮದ ಸರ್ವೆ ನಂ. 109ರ 5 ಎಕರೆ 3 ಗು೦ಟೆ ಜಮೀನಿಗೆ ಸಂಬಂಧಿಸಿ ಹೆಮ್ಮಿಗೆಪುರ ವಾರ್ಡ್ನ ಪಾಲಿಕೆಯ ಮಾಜಿ ಸದಸ್ಯೆಯ ಪತಿಯಾದ ಎಚ್.ನಾಗರಾಜಯ್ಯ ಅವರು ಜೀವಂತವಿರುವ ಭೂಮಾಲೀಕರು ಮೃತಪಟ್ಟಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಾಧಿಕಾರದಿ೦ದ ₹ 37 ಲಕ್ಷ ಭೂಪರಿಹಾರ ಪಡೆದಿದ್ದರು. ಬನಶ೦ಕರಿ 6ನೇ ಹಂತದ ಬಡಾವಣೆಯ 2ನೇ ಬ್ಲಾಕ್ನಲ್ಲಿ 30x40 ಅಡಿ ನಿವೇಶನ (ಸಂಖ್ಯೆ 120), 4ನೇ ‘ಬಿ’ ಬ್ಲಾಕ್ನಲ್ಲಿ 40x60 ಅಡಿ ವಿಸ್ತೀರ್ಣದ ಐದು ನಿವೇಶನಗಳನ್ನು (ಸಂಖ್ಯೆ 1352, 2412, 2154 ಮತ್ತು 2155) ಹಂಚಿಕೆ ಮಾಡಿಸಿಕೊಂಡಿದ್ದರು. ಬಿಡಿಎ ಜಾಗೃತದಳದ ಪೊಲೀಸರು ಭೂ ಪರಿಹಾರದ ಮೊತ್ತವನ್ನು ಮತ್ತು ನಿವೇಶನಗಳನ್ನು ಪ್ರಾಧಿಕಾರದ ವಶಕ್ಕೆ ಪಡೆದು
ಕೊಂಡಿದ್ದಾರೆ.