‘ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಲೋಹಿತ್ (32), ಕಂಪ್ಯೂಟರ್ ಆಪರೇಟರ್ ಸುನೀಲ್ (28), ಮಧ್ಯವರ್ತಿಗಳಾದ ವಿಕ್ರಮ್ ಜೈನ್, ಪವನ್, ಮಂಜು ನಾಯಕ್ ಹಾಗೂ ರಾಮಚಂದ್ರ ಬಂಧಿತರು. ಬಿಡಿಎ ನಿವೇಶನ ವಂಚನೆ ಸಂಬಂಧ ಇತ್ತೀಚೆಗೆ ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿದ್ದವು. ಅದರ ತನಿಖೆ ಕೈಗೊಂಡು ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.