ಬೆಂಗಳೂರು ಉತ್ತರ ತಾಲ್ಲೂಕಿನ ಹೊಸಹಳ್ಳಿ, ಹುತ್ತನಹಳ್ಳಿ, ಮೀಸಗಾನಹಳ್ಳಿ, ಬೊಯಿಲ ಹಳ್ಳಿ, ಮುತ್ತುಕದಹಳ್ಳಿ ಹಾಗೂ ಬೇಗೂರು ಗ್ರಾಮಗಳ ಸ್ಥಳೀಯ ಯೋಜನಾ ಪ್ರದೇಶಗಳನ್ನು ಬಿಡಿಎ ಹಾಗೂ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್ಡಿಎ) ವ್ಯಾಪ್ತಿಗೆ ಸೇರಿಸುವಂತೆ 2019ರ ಮಾ 13ರಂದೇ ಬಿಐಎಎಪಿಎಯು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.