ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಭೂಸ್ವಾಧೀನಾಧಿಕಾರಿ ವಿಭಾಗದ ಮೇಲ್ವಿಚಾರಕ ವಿ.ಆರ್.ಮಹೇಶ್ ಕುಮಾರ್ ಅವರನ್ನು ಮೇಲಧಿಕಾರಿ ಆದೇಶ ಪಾಲಿಸಲಿಲ್ಲ ಎಂಬ ಕಾರಣಕ್ಕೆ ಆಯುಕ್ತ ಎಚ್.ಆರ್.ಮಹದೇವ್ ಅಮಾನತು ಮಾಡಿದ್ದಾರೆ.
ಮಹೇಶ್ ಅವರನ್ನು ಬಿಡಿಎ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ವಿಭಾಗದ ಭಾಗ –1ಕ್ಕೆ ವರ್ಗ ಮಾಡಲಾಗಿತ್ತು. ಅವರು 2020ರ ನವೆಂಬರ್ 04ರಿಂದ ಈ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.