ಕೆಎಲ್ಇ ಆಸ್ಪತ್ರೆಯ ಕಡೆಯಿಂದ ಕೃಷ್ಣದೇವರಾಯ ಸರ್ಕಲ್ ಕಡೆಗೆ ಬರುತ್ತಿದ್ದ ಕ್ರೇನ್ ಇಳಿಜಾರಿನಲ್ಲಿ ವೇಗವಾಗಿ ಹೋಗುತ್ತಿತ್ತು. ಈ ವೇಳೆ ಏಕಾಏಕಿ ಬ್ರೇಕ್ ವಿಫಲವಾಯಿತು. ಕ್ರೇನಿನ ಮುಂದೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ರಸ್ತೆಯ ಬದಿಯ ನಿಲ್ದಾಣದ ಮುಂದೆ ನಿಂತಿತ್ತು. ಇನ್ನೇನು ಅದಕ್ಕೆ ಕ್ರೇನ್ ಗುದ್ದಿಬಿಡುತ್ತದೆ ಎನ್ನುವಷ್ಟರಲ್ಲಿ ಚಾಲಕ ಕ್ರೇನ್ ಅನ್ನು ಎಡಕ್ಕೆ ತಿರುವಿದರು. ಅದರ ಮುಂಭಾಗ ರಸ್ತೆ ವಿಭಜಕಕ್ಕೆ ಗುದ್ದಿ ನಿಂತಿತು. ಮೇಲ್ಭಾಗ ರಸ್ತೆಯ ಇನ್ನೊಂದು ಬದಿಗೆ ಜೋತು ಬಿದ್ದಿತು.