ಬೆಂಗಳೂರು: ಕಾರ್ಮಿಕರ ದಿನದ ಅಂಗವಾಗಿ ಬೇಳೂರು ಸಹಾಯಹಸ್ತ ಟ್ರಸ್ಟ್ ವತಿಯಿಂದ ಕೋವಿಡ್ ರೋಗಿಗಳ ಮನೆ ಬಾಗಿಲಿಗೆ ಹಾಗೂಪೌರಕಾರ್ಮಿಕರಿಗೆ ಔಷಧ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
‘ಮನೆಯಲ್ಲೇ ಚಿಕಿತ್ಸೆ ಪಡೆಯುವ ಕೋವಿಡ್ ರೋಗಿಗಳಿಗೆ ಉಚಿತವಾಗಿ ಔಷಧ ಕಿಟ್ ವಿತರಿಸಲಾಗುವುದು. ಇದಕ್ಕಾಗಿ ಸಹಾಯವಾಣಿ ಆರಂಭಿಸಿದ್ದೇವೆ’ ಎಂದುಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.
‘ಸಹಾಯವಾಣಿಗೆ ಕರೆ ಮಾಡಿದ ಒಂದು ಗಂಟೆಯೊಳಗೆ ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಕೊರೊನಾ ಪಾಸಿಟಿವ್ ಇರುವವರಿಗೆ ಮನೆ ಬಾಗಿಲಿಗೆ ಔಷಧ ಕಿಟ್ ವಿತರಿಸಲಾಗುವುದು. ಕಿಟ್ನಲ್ಲಿ 15 ದಿನಗಳಿಗೆ ಆಗುವಷ್ಟು ಔಷಧಗಳು ಇರಲಿವೆ’ ಎಂದೂ ಹೇಳಿದರು.