ಕೆಂಗೇರಿ ಬಳಿ ಮೂತ್ರ ವಿಸರ್ಜನೆಗೆಂದು ಪೊಲೀಸರು ಕಾರು ನಿಲ್ಲಿಸಿದಾಗ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ತಡೆಯಲು ಹೋದ ಹೆಡ್ ಕಾನ್ಸ್ಟೆಬಲ್ ಮಹದೇವಯ್ಯ ಮೇಲೂ ಹಲ್ಲೆ ಮಾಡಿದ್ದ. ಆರೋಪಿಯನ್ನು ಹಿಡಿಯಲು ಮುಂದಾಗಿದ್ದ ಇನ್ಸ್ಪೆಕ್ಟರ್, ಶರಣಾಗುವಂತೆ ಹೇಳಿದರು. ಅಷ್ಟಾದರೂ ಆರೋಪಿ ಓಡಲಾರಂಭಿಸಿದ್ದ. ಅವಾಗಲೇ ಇನ್ಸ್ಪೆಕ್ಟರ್, ಆರೋಪಿಯ ಬಲಗಾಲಿಗೆ ಗುಂಡು ಹೊಡೆದು ಸೆರೆ ಹಿಡಿದಿದ್ದಾರೆ.