<p><strong>ಬೆಂಗಳೂರು</strong>: ವೇಗವಾಗಿ ಬೆಳೆಯುತ್ತಿ ರುವ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರ ಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಆಳವಾಗಿ ಬೇರೂರಿದ್ದು, ಭಸ್ಮಾಸುರನಂತೆ ಮಾನವ ಕುಲಕ್ಕೆ ಮಾರಕವಾಗಬಾರದು’ ಎಂದು ಸಿಎಸ್ಆರ್ ಫೋರ್ತ್ ಪ್ಯಾರಡೈಮ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಗೋಪಾಲ ಕೃಷ್ಣ ಪಾತ್ರ ಹೇಳಿದರು.</p>.<p>ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಅಂಗವಾಗಿ ಗಾರ್ಡನ್ ಸಿಟಿ ವಿಶ್ವ ವಿದ್ಯಾಲಯದಲ್ಲಿ ಡಾ.ಎ.ಪಿ.ಜಿ. ಅಬ್ದುಲ್ಕಲಾಂ ಎಂಜಿನಿಯರಿಂಗ್ ಶಾಲೆಯು ಹಮ್ಮಿಕೊಂಡಿದ್ದ ‘ವಿಜ್ಞಾನ–35’ ಉಪನ್ಯಾಸದಲ್ಲಿ ಮಾತನಾಡಿದರು.</p>.<p>‘ಜೀವನದಲ್ಲಿ ಎ.ಐ ತಂತ್ರಜ್ಞಾನದ ಪ್ರಭಾವ ಹೆಚ್ಚುತ್ತಿದೆ. ಎಂಜಿನಿಯರ್ಗಳು, ಸಂಶೋಧಕರು ವಿಮರ್ಶಾತ್ಮಕ ಚಿಂತನೆ, ಹೊಣೆಗಾರಿಕೆ, ನಾವೀಣ್ಯತೆ ಮತ್ತುಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳುವ ಗುಣಬೆಳೆಸಿಕೊಳ್ಳಬೇಕು.ಭಾರತ ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ತುರ್ತು ಪರಿಹರಿಸುವ ತಂತ್ರಗಾರಿಕೆ ಕೊರತೆ ಕುರಿತು ಗಮನ ಹರಿಸಬೇಕು’ ಎಂದರು.</p>.<p>ಕುಲಪತಿ ರಾಮಚಂದ್ರ ಗೌಡ, ಕುಲಸಚಿವರಾದ ಶೀಜಾ, ಶೈಕ್ಷಣಿಕ ವ್ಯವಹಾರ ಗಳ ಡೀನ್ ಬಿಜು ಧರ್ಮಪಾಲನ್, ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯ ಸಂಯೋಜಕಿ ಎಸ್.ಯಶೋದಮ್ಮ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-4-1232796338</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವೇಗವಾಗಿ ಬೆಳೆಯುತ್ತಿ ರುವ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರ ಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಆಳವಾಗಿ ಬೇರೂರಿದ್ದು, ಭಸ್ಮಾಸುರನಂತೆ ಮಾನವ ಕುಲಕ್ಕೆ ಮಾರಕವಾಗಬಾರದು’ ಎಂದು ಸಿಎಸ್ಆರ್ ಫೋರ್ತ್ ಪ್ಯಾರಡೈಮ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಗೋಪಾಲ ಕೃಷ್ಣ ಪಾತ್ರ ಹೇಳಿದರು.</p>.<p>ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಅಂಗವಾಗಿ ಗಾರ್ಡನ್ ಸಿಟಿ ವಿಶ್ವ ವಿದ್ಯಾಲಯದಲ್ಲಿ ಡಾ.ಎ.ಪಿ.ಜಿ. ಅಬ್ದುಲ್ಕಲಾಂ ಎಂಜಿನಿಯರಿಂಗ್ ಶಾಲೆಯು ಹಮ್ಮಿಕೊಂಡಿದ್ದ ‘ವಿಜ್ಞಾನ–35’ ಉಪನ್ಯಾಸದಲ್ಲಿ ಮಾತನಾಡಿದರು.</p>.<p>‘ಜೀವನದಲ್ಲಿ ಎ.ಐ ತಂತ್ರಜ್ಞಾನದ ಪ್ರಭಾವ ಹೆಚ್ಚುತ್ತಿದೆ. ಎಂಜಿನಿಯರ್ಗಳು, ಸಂಶೋಧಕರು ವಿಮರ್ಶಾತ್ಮಕ ಚಿಂತನೆ, ಹೊಣೆಗಾರಿಕೆ, ನಾವೀಣ್ಯತೆ ಮತ್ತುಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳುವ ಗುಣಬೆಳೆಸಿಕೊಳ್ಳಬೇಕು.ಭಾರತ ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ತುರ್ತು ಪರಿಹರಿಸುವ ತಂತ್ರಗಾರಿಕೆ ಕೊರತೆ ಕುರಿತು ಗಮನ ಹರಿಸಬೇಕು’ ಎಂದರು.</p>.<p>ಕುಲಪತಿ ರಾಮಚಂದ್ರ ಗೌಡ, ಕುಲಸಚಿವರಾದ ಶೀಜಾ, ಶೈಕ್ಷಣಿಕ ವ್ಯವಹಾರ ಗಳ ಡೀನ್ ಬಿಜು ಧರ್ಮಪಾಲನ್, ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯ ಸಂಯೋಜಕಿ ಎಸ್.ಯಶೋದಮ್ಮ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-4-1232796338</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>