<p><strong>ಬೆಂಗಳೂರು:</strong> ‘ವಿದೇಶಿ ಶೈಲಿ’ಯಲ್ಲಿ ಪ್ರೇಮ ನಿವೇದನೆ ಮಾಡುತ್ತೇನೆ ಎಂದು ನಂಬಿಸಿ ಕೈ–ಕಾಲು ಕಟ್ಟಿ ಪ್ರಿಯಕರನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾ ನಗರದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನಡೆದಿದೆ.</p>.<p>ಕಿರಣ್ (27) ಸಜೀವ ದಹನವಾದ ಯುವಕ. ಕೃತ್ಯ ಎಸಗಿದ ಮಾಗಡಿ ಮುಖ್ಯರಸ್ತೆಯ ಅಂಜನಾ ನಗರದ ನಿವಾಸಿ ಪ್ರೇಮಾ (27) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.</p>.<p>ರಾಜಾಜಿ ನಗರದ ವಿ.ಐ ಸ್ಟೋರ್ನಲ್ಲಿ (ಟೆಲಿಕಾಂ ಸೇವಾ ಪೂರೈಕೆ ಸಂಸ್ಥೆ) ಕಿರಣ್ ಹಾಗೂ ಪ್ರೇಮಾ ಕೆಲಸ ಮಾಡುತ್ತಿದ್ದರು. ಇಬ್ಬರೂ ಪರಿಚಯವಾದ ಬಳಿಕ ಪ್ರೀತಿಸುತ್ತಿದ್ದರು.</p>.<p>‘ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ ಎಸಗಲಾಗಿದೆ. ಪ್ರೇಮಿಗಳ ನಡುವೆ ಯಾವ ಕಾರಣಕ್ಕೆ ಗಲಾಟೆ ನಡೆದು, ಕೃತ್ಯ ಎಸಗಲಾಗಿದೆ, ಕೃತ್ಯದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಕಿರಣ್ ಇತ್ತೀಚೆಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದಾಗಿ ಭಾವಿಸಿದ್ದಯುವತಿ ಸೀಮೆಎಣ್ಣೆ ಸುರಿದು ಕೊಲೆ ಮಾಡಿದ್ದಾಳೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.</p>.<p>ಕಿರಣ್ ಅವರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಶಂಕಿಸಿದ್ದರು. ತನಿಖೆ ಮುಂದುವರಿಸಿದಾಗ ಯುವತಿ ಕೃತ್ಯ ಬಯಲಾಯಿತು ಎಂದು ಮೂಲಗಳು ಹೇಳಿವೆ.</p>.<p>ಮನೆಗೆ ಕರೆಸಿಕೊಂಡಿದ್ದ ಯುವತಿ: ‘ಪ್ರೇಮಾ ಅವರ ತಾಯಿ ಹಾಗೂ ಸಹೋದರ ಮಂಗಳವಾರ ಬೆಳಿಗ್ಗೆಯೇ ಕೆಲಸಕ್ಕೆ ತೆರಳಿದ್ದರು. ಆಗ, ಕಿರಣ್ಗೆ ಕರೆ ಮಾಡಿದ್ದ ಯುವತಿ ಮನೆಗೆ ಬರುವಂತೆ ಕೋರಿಕೊಂಡಿದ್ದರು. ಕೆಲಸದ ನಿಮಿತ್ತ ನೆಲಮಂಗಲದತ್ತ ತೆರಳುತ್ತಿದ್ದ ಕಿರಣ್, ಯುವತಿಯ ಕೋರಿಕೆಯಂತೆ ಅಂಜನಾ ನಗರಕ್ಕೆ ವಾಪಸ್ ಬಂದಿದ್ದರು. ಮನೆಗೆ ಬಂದ ಪ್ರಿಯಕರನಿಗೆ ‘ವಿದೇಶಿ ಶೈಲಿ’ಯಲ್ಲಿ ಪ್ರೇಮ ನಿವೇದನೆ ಮಾಡುವುದಾಗಿ ನಂಬಿಸಿ ಕಣ್ಣಿಗೆ ಬಟ್ಟೆ ಹಾಗೂ ಕಾಲಿಗೆ ಹಗ್ಗ ಕಟ್ಟಿದ್ದರು. ಯಾಕಿಷ್ಟು ಬಿಗಿಯಾಗಿ ಹಗ್ಗ ಕಟ್ಟುತ್ತೀಯಾ ಎಂಬುದಾಗಿ ಕಿರಣ್ ಪ್ರಶ್ನಿಸಿದ್ದರು. ಆಗಲೂ ಇದು ವಿದೇಶಿ ಮಾದರಿ ಎಂಬುದಾಗಿ ಹೇಳಿ ಯುವತಿ ನಂಬಿಸಿದ್ದರು’ ಎಂದು ಮೂಲಗಳು ಹೇಳಿವೆ.</p>.<p>ಮನೆಗೆ ಸೀಮೆಎಣ್ಣೆ ತಂದಿಟ್ಟುಕೊಂಡಿದ್ದ ಯುವತಿ: ಪ್ರಿಯಕರನ ಕೊಲೆ ಮಾಡುವ ಉದ್ದೇಶದಿಂದ ಯುವತಿ ಮೊದಲೇ ಸೀಮೆಎಣ್ಣೆ ಖರೀದಿಸಿ ಮನೆಗೆ ತಂದಿಟ್ಟುಕೊಂಡಿದ್ದರು. ಹಗ್ಗ ಬಿಗಿದ ಮೇಲೆ ಪ್ರಿಯಕರನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಯುವಕ ನರಳಾಡುತ್ತಿದ್ದ ದೃಶ್ಯವನ್ನು ಮೊಬೈಲ್ನಲ್ಲಿ ಯುವತಿ ಚಿತ್ರೀಕರಿಸಿಕೊಂಡಿದ್ದಾರೆ. ಯುವತಿಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ.</p>.<p>ಪ್ರೀತಿಯಲ್ಲಿ ವೈಮನಸ್ಸು ಮೂಡಿತ್ತೇ? ಇದು ಪೂರ್ವನಿಯೋಜಿತ ಸಂಚೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಘಟನಾ ಸ್ಥಳಕ್ಕೆ ಎಸಿಪಿ ಅಶೋಕ್ ಮತ್ತು ಇನ್ಸ್ಪೆಕ್ಟರ್ ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-51-3250603</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ವಿದೇಶಿ ಶೈಲಿ’ಯಲ್ಲಿ ಪ್ರೇಮ ನಿವೇದನೆ ಮಾಡುತ್ತೇನೆ ಎಂದು ನಂಬಿಸಿ ಕೈ–ಕಾಲು ಕಟ್ಟಿ ಪ್ರಿಯಕರನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾ ನಗರದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನಡೆದಿದೆ.</p>.<p>ಕಿರಣ್ (27) ಸಜೀವ ದಹನವಾದ ಯುವಕ. ಕೃತ್ಯ ಎಸಗಿದ ಮಾಗಡಿ ಮುಖ್ಯರಸ್ತೆಯ ಅಂಜನಾ ನಗರದ ನಿವಾಸಿ ಪ್ರೇಮಾ (27) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.</p>.<p>ರಾಜಾಜಿ ನಗರದ ವಿ.ಐ ಸ್ಟೋರ್ನಲ್ಲಿ (ಟೆಲಿಕಾಂ ಸೇವಾ ಪೂರೈಕೆ ಸಂಸ್ಥೆ) ಕಿರಣ್ ಹಾಗೂ ಪ್ರೇಮಾ ಕೆಲಸ ಮಾಡುತ್ತಿದ್ದರು. ಇಬ್ಬರೂ ಪರಿಚಯವಾದ ಬಳಿಕ ಪ್ರೀತಿಸುತ್ತಿದ್ದರು.</p>.<p>‘ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ ಎಸಗಲಾಗಿದೆ. ಪ್ರೇಮಿಗಳ ನಡುವೆ ಯಾವ ಕಾರಣಕ್ಕೆ ಗಲಾಟೆ ನಡೆದು, ಕೃತ್ಯ ಎಸಗಲಾಗಿದೆ, ಕೃತ್ಯದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಕಿರಣ್ ಇತ್ತೀಚೆಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದಾಗಿ ಭಾವಿಸಿದ್ದಯುವತಿ ಸೀಮೆಎಣ್ಣೆ ಸುರಿದು ಕೊಲೆ ಮಾಡಿದ್ದಾಳೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.</p>.<p>ಕಿರಣ್ ಅವರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಶಂಕಿಸಿದ್ದರು. ತನಿಖೆ ಮುಂದುವರಿಸಿದಾಗ ಯುವತಿ ಕೃತ್ಯ ಬಯಲಾಯಿತು ಎಂದು ಮೂಲಗಳು ಹೇಳಿವೆ.</p>.<p>ಮನೆಗೆ ಕರೆಸಿಕೊಂಡಿದ್ದ ಯುವತಿ: ‘ಪ್ರೇಮಾ ಅವರ ತಾಯಿ ಹಾಗೂ ಸಹೋದರ ಮಂಗಳವಾರ ಬೆಳಿಗ್ಗೆಯೇ ಕೆಲಸಕ್ಕೆ ತೆರಳಿದ್ದರು. ಆಗ, ಕಿರಣ್ಗೆ ಕರೆ ಮಾಡಿದ್ದ ಯುವತಿ ಮನೆಗೆ ಬರುವಂತೆ ಕೋರಿಕೊಂಡಿದ್ದರು. ಕೆಲಸದ ನಿಮಿತ್ತ ನೆಲಮಂಗಲದತ್ತ ತೆರಳುತ್ತಿದ್ದ ಕಿರಣ್, ಯುವತಿಯ ಕೋರಿಕೆಯಂತೆ ಅಂಜನಾ ನಗರಕ್ಕೆ ವಾಪಸ್ ಬಂದಿದ್ದರು. ಮನೆಗೆ ಬಂದ ಪ್ರಿಯಕರನಿಗೆ ‘ವಿದೇಶಿ ಶೈಲಿ’ಯಲ್ಲಿ ಪ್ರೇಮ ನಿವೇದನೆ ಮಾಡುವುದಾಗಿ ನಂಬಿಸಿ ಕಣ್ಣಿಗೆ ಬಟ್ಟೆ ಹಾಗೂ ಕಾಲಿಗೆ ಹಗ್ಗ ಕಟ್ಟಿದ್ದರು. ಯಾಕಿಷ್ಟು ಬಿಗಿಯಾಗಿ ಹಗ್ಗ ಕಟ್ಟುತ್ತೀಯಾ ಎಂಬುದಾಗಿ ಕಿರಣ್ ಪ್ರಶ್ನಿಸಿದ್ದರು. ಆಗಲೂ ಇದು ವಿದೇಶಿ ಮಾದರಿ ಎಂಬುದಾಗಿ ಹೇಳಿ ಯುವತಿ ನಂಬಿಸಿದ್ದರು’ ಎಂದು ಮೂಲಗಳು ಹೇಳಿವೆ.</p>.<p>ಮನೆಗೆ ಸೀಮೆಎಣ್ಣೆ ತಂದಿಟ್ಟುಕೊಂಡಿದ್ದ ಯುವತಿ: ಪ್ರಿಯಕರನ ಕೊಲೆ ಮಾಡುವ ಉದ್ದೇಶದಿಂದ ಯುವತಿ ಮೊದಲೇ ಸೀಮೆಎಣ್ಣೆ ಖರೀದಿಸಿ ಮನೆಗೆ ತಂದಿಟ್ಟುಕೊಂಡಿದ್ದರು. ಹಗ್ಗ ಬಿಗಿದ ಮೇಲೆ ಪ್ರಿಯಕರನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಯುವಕ ನರಳಾಡುತ್ತಿದ್ದ ದೃಶ್ಯವನ್ನು ಮೊಬೈಲ್ನಲ್ಲಿ ಯುವತಿ ಚಿತ್ರೀಕರಿಸಿಕೊಂಡಿದ್ದಾರೆ. ಯುವತಿಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ.</p>.<p>ಪ್ರೀತಿಯಲ್ಲಿ ವೈಮನಸ್ಸು ಮೂಡಿತ್ತೇ? ಇದು ಪೂರ್ವನಿಯೋಜಿತ ಸಂಚೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಘಟನಾ ಸ್ಥಳಕ್ಕೆ ಎಸಿಪಿ ಅಶೋಕ್ ಮತ್ತು ಇನ್ಸ್ಪೆಕ್ಟರ್ ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-51-3250603</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>