<p><strong>ಕೆ.ಆರ್.ಪುರ:</strong> ಆವಲಹಳ್ಳಿ ಸಮೀಪ ವಿರುವ ಎಲೆ ಮಲ್ಲಪ್ಪಶೆಟ್ಟಿ ಕೆರೆ ಕೋಡಿಯಲ್ಲಿ ಗೆಳೆಯರೊಂದಿಗೆ ಆಟ ವಾಡಲು ತೆರಳಿದ್ದ ಬಾಲಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.</p>.<p>ಎರಡು ದಿನಗಳಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರೂ, ಮೃತ ದೇಹ ಪತ್ತೆಯಾಗಿಲ್ಲ. ಉತ್ತರ ಪ್ರದೇಶದ ಹೃತಿಕ್ (16) ಆವಲಹಳ್ಳಿಯಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದ.</p>.<p>‘ಊರಿನಿಂದ ಶನಿವಾರ ಬಂದಿದ್ದ ಹೃತಿಕ್, ಆ ದಿನವೇ ಸ್ನೇಹಿತರೊಂದಿಗೆ ಕೆರೆ ಕೋಡಿಯಲ್ಲಿ ಆಟವಾಡಲು ಹೋಗಿದ್ದಾನೆ. ಈ ವೇಳೆ ರಭಸವಾಗಿ ಹರಿಯುತ್ತಿರುವ ಕೊಳಚೆ ನೀರಿನಲ್ಲಿ ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ. ನೊರೆ ಹೆಚ್ಚಾಗಿರುವುದರಿಂದ ಹೊರ ಬರಲಾಗದೆ ಅಸುನೀಗಿದ್ದಾನೆ’ ಎಂದು ಹೇಳಲಾಗಿದೆ.</p>.<p>ಮೊದಲಿಗೆ ಕಾಣೆಯಾಗಿರುವ ಬಗ್ಗೆ ಶಂಕಿಸಿ ಆವಲಹಳ್ಳಿ ಪೊಲೀಸರಿಗೆ ಪೋಷಕರು ದೂರು ನೀಡಿ ದ್ದಾರೆ. ಬಳಿಕ ಆಟ ವಾಡಲು ತೆರಳಿದ್ದ ಗೆಳೆಯರನ್ನು ವಿಚಾರಿಸಿ ದಾಗ ಕೊಚ್ಚಿ ಹೋಗಿರುವ ಮಾಹಿತಿ ನೀಡಿದ್ದಾರೆ.</p>.<p>ಬಾಲಕ ಜಾರಿ ಬಿದ್ದ ಜಾಗದಲ್ಲಿ ರಭಸವಾಗಿ ಹರಿಯುತ್ತಿರುವ ಕೊಳಚೆ ನೀರು ಹೆಚ್ಚಿದ್ದರಿಂದ ಕಾರ್ಯಾ ಚರಣೆಗೆ ಅಡ್ಡಿ ಉಂಟು ಮಾಡಿದೆ.</p>.<p>‘ಸುಮಾರು 300 ಎಕರೆ ವಿಸ್ತೀರ್ಣದ ಎಲೆಮಲ್ಲಪ್ಪ ಶೆಟ್ಟಿ ಕೆರೆಗೆ ನಗರದ ಕೊಳಚೆ ನೀರು ಸೇರಿ ಕಲುಷಿತಗೊಂಡಿದೆ. ಕೆರೆ ಕೋಡಿಯಲ್ಲಿ ಸಾರ್ವಜನಿಕರು ಪ್ರವೇಶಿಸದಂತೆ ತಡೆಗೋಡೆಯಿಲ್ಲ. ಈ ಪ್ರದೇಶ ಅನೈತಿಕ ಚಟುವಟಿಕೆಗೆ ತಾಣವಾಗಿದೆ. ಸಣ್ಣ ನೀರಾವರಿ ಇಲಾಖೆ ಕೆರೆ ಅಭಿವೃದ್ಧಿಗೆ ಕ್ರಮಕೈಗೊಂಡಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ದೂರಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-4-1932020682</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ಆವಲಹಳ್ಳಿ ಸಮೀಪ ವಿರುವ ಎಲೆ ಮಲ್ಲಪ್ಪಶೆಟ್ಟಿ ಕೆರೆ ಕೋಡಿಯಲ್ಲಿ ಗೆಳೆಯರೊಂದಿಗೆ ಆಟ ವಾಡಲು ತೆರಳಿದ್ದ ಬಾಲಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.</p>.<p>ಎರಡು ದಿನಗಳಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರೂ, ಮೃತ ದೇಹ ಪತ್ತೆಯಾಗಿಲ್ಲ. ಉತ್ತರ ಪ್ರದೇಶದ ಹೃತಿಕ್ (16) ಆವಲಹಳ್ಳಿಯಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದ.</p>.<p>‘ಊರಿನಿಂದ ಶನಿವಾರ ಬಂದಿದ್ದ ಹೃತಿಕ್, ಆ ದಿನವೇ ಸ್ನೇಹಿತರೊಂದಿಗೆ ಕೆರೆ ಕೋಡಿಯಲ್ಲಿ ಆಟವಾಡಲು ಹೋಗಿದ್ದಾನೆ. ಈ ವೇಳೆ ರಭಸವಾಗಿ ಹರಿಯುತ್ತಿರುವ ಕೊಳಚೆ ನೀರಿನಲ್ಲಿ ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ. ನೊರೆ ಹೆಚ್ಚಾಗಿರುವುದರಿಂದ ಹೊರ ಬರಲಾಗದೆ ಅಸುನೀಗಿದ್ದಾನೆ’ ಎಂದು ಹೇಳಲಾಗಿದೆ.</p>.<p>ಮೊದಲಿಗೆ ಕಾಣೆಯಾಗಿರುವ ಬಗ್ಗೆ ಶಂಕಿಸಿ ಆವಲಹಳ್ಳಿ ಪೊಲೀಸರಿಗೆ ಪೋಷಕರು ದೂರು ನೀಡಿ ದ್ದಾರೆ. ಬಳಿಕ ಆಟ ವಾಡಲು ತೆರಳಿದ್ದ ಗೆಳೆಯರನ್ನು ವಿಚಾರಿಸಿ ದಾಗ ಕೊಚ್ಚಿ ಹೋಗಿರುವ ಮಾಹಿತಿ ನೀಡಿದ್ದಾರೆ.</p>.<p>ಬಾಲಕ ಜಾರಿ ಬಿದ್ದ ಜಾಗದಲ್ಲಿ ರಭಸವಾಗಿ ಹರಿಯುತ್ತಿರುವ ಕೊಳಚೆ ನೀರು ಹೆಚ್ಚಿದ್ದರಿಂದ ಕಾರ್ಯಾ ಚರಣೆಗೆ ಅಡ್ಡಿ ಉಂಟು ಮಾಡಿದೆ.</p>.<p>‘ಸುಮಾರು 300 ಎಕರೆ ವಿಸ್ತೀರ್ಣದ ಎಲೆಮಲ್ಲಪ್ಪ ಶೆಟ್ಟಿ ಕೆರೆಗೆ ನಗರದ ಕೊಳಚೆ ನೀರು ಸೇರಿ ಕಲುಷಿತಗೊಂಡಿದೆ. ಕೆರೆ ಕೋಡಿಯಲ್ಲಿ ಸಾರ್ವಜನಿಕರು ಪ್ರವೇಶಿಸದಂತೆ ತಡೆಗೋಡೆಯಿಲ್ಲ. ಈ ಪ್ರದೇಶ ಅನೈತಿಕ ಚಟುವಟಿಕೆಗೆ ತಾಣವಾಗಿದೆ. ಸಣ್ಣ ನೀರಾವರಿ ಇಲಾಖೆ ಕೆರೆ ಅಭಿವೃದ್ಧಿಗೆ ಕ್ರಮಕೈಗೊಂಡಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ದೂರಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-4-1932020682</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>