ಪುತ್ತೂರು: ಕೊಪ್ಪಳ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಲಾವಣಿ ಸ್ಪರ್ಧೆಯಲ್ಲಿ ಸಂಗೀತ ಎಂಬುವರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಯುವಜನ ಮೇಳಕ್ಕೆ ಆಯ್ಕೆಯಾಗಿದ್ದರು. ಆದರೆ ಶನಿವಾರ ನಡೆದ ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಸಂಗೀತ ಅವರ ಬದಲು ರಾಜರಾಜೇಶ್ವರಿ ಎಂಬವರನ್ನು ಹಾಡಿಸಲಾಯಿತು!
‘ಪ್ರಕರಣದ ಬಗ್ಗೆ ಕಾರ್ಯಕ್ರಮದ ಆಯೋಜಕರಲ್ಲಿ ಪ್ರಶ್ನಿಸಿದರೂ ಗಾಯಕಿಗೆ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ಅವರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗಿದೆ’ ಎಂದು ಕೊಪ್ಪಳದಿಂದ ಬಂದ ಇತರ ಕಲಾವಿದರು ಆರೋಪಿಸಿದರು.